ರಾಜ್ಯ ಸುದ್ದಿಗಳು

ಶಿವಮೊಗ್ಗದ ಪೊಲೀಸರು ಗಲಭೆಯನ್ನ ಹತೋಟಿಗೆ ತೆಗೆದುಕೊಳ್ಳಲಾಗಿದೆ

ಸುದ್ದಿಲೈವ್/ಶಿವಮೊಗ್ಗ

ಜಿಲ್ಲೆಯಲ್ಲಿ 3000ಕ್ಕೂ ಹೆಚ್ಚು ಗಣಪತಿಯನ್ನ ಹಾಗೂ ಹಿಂದೂ ಮಹಾಸಭಾ ಗಣಪತಿಯನ್ನ ಉಶಸ್ವಿಯಾಗಿ ವಿಸರ್ಜಿಸಲಾಯಿತು. ಈದ್ ಹಬ್ಬ ಇದ್ದರೂ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಅವಕಾಶ ನೀಡಲಾಗಿತ್ತು. ಇದಕ್ಕೆ ಮುಸ್ಲೀಂ ಮುಖಂಡರು ಸಹ ಯಶಶ್ವಿಯಾಗಿ ಗಣಪತಿ ವಿಸರ್ಜನೆ ನಡೆಯಲು ಸಹಕರಿಸಿದ್ದರು ಎಂದು ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ತಿಳಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಗಿಗುಡ್ಡದ ಫ್ಲೆಕ್ಸ್ ವಿಚಾರದಲ್ಲಿ ಗೊಂದಲ ನಿರ್ಮಾಣವಾಗಿತ್ತು. ಯಾವ ಪಕ್ಷದವರೂ ಈದ್ ಮೆರವಣಿಗೆಯಲ್ಲಿ ತೊಂದರೆ ಕೊಡದೆ ಸಹಕರಿಸಲಾಗಿತ್ತು. ಮೆರವಣಿಗೆಯಲ್ಲಿ ಹಿಂಬದಿಯಿಂದ ಕಲ್ಲು ಎಸೆಯಲಾಗಿದ್ದು, ಕಲ್ಲು ತೂರಾಟದಲ್ಲಿ ಪೊಲೀಸರ ಮೇಲೆ ಬಿದ್ದಿದೆ.

ಮೆರವಣಿಗೆ ಪಾಸ್ ಆದ ಮೇಲೆ ಕಲ್ಲುತೂರಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಒಂದು ಗಂಟೆಯಲ್ಲಿ ಹತೋಟಿಗೆ ತೆಗೆದುಕೊಂಡಿದ್ದಾರೆ. ರಾಗಿಗುಡ್ಡದಲ್ಲಿ ನಡೆದ ಘಟನೆ ಸಣ್ಣ ಘಟನೆ. ಮಾಧ್ಯಮಗಳು ವಿಜೃಂಭಿಸಿದೆ. ಒಂದೇ ಸಮುದಾಯದವರನ್ನ ಟಾರ್ಗೆಟ್ ಮಾಡಬಾರದಿತ್ತು ಎಂದರು.

ಬಿಜೆಪಿಯ ಮಾಜಿ ಸಚಿವರಾದ ಈಶ್ವರಪ್ಪ, ಜ್ಞಾನೇಂದ್ರ ಸಿಟಿ ರವಿ ಮಾತ್ತು ಮಾಜಿ ಸಿಎಂ‌ ಬಸವರಾಜ್ ಬೊಮ್ಮಾಯಿ ಅವರು ಕಾಂಗ್ರೆಸ್ ಷಡಯಂತ್ರ ಎಂದು ಸ್ಥಳೀಯ ಬಗ್ಗೆ ಗೊತ್ತಿಲ್ಲದಂತೆ ಮಾತನಾಡಿದ್ದಾರೆ. ವಿಷಯಗಳನ್ನ‌ ಶಾಂತಿ ರೀತಿ ಕಾಪಾಡುವ ಪ್ರಯತ್ನ ಪಡೆಯದೆ ಪ್ರಚೋದನೆ ನೀಡಿದರು. ಪೊಲೀಸರು ಒಂದು ತಿಂಗಳಿಂದ ಕಾನೂನು ರೀತಿ ಮತ್ತು ಶಾಂತಿ ಬಯಸಿದ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದರು.

ಯಾವುದೇ ಕಾಂಗ್ರೆಸ್ ನವರು ಗಲಭೆಕೋರರನ್ನ ರಕ್ಷಿಸಿ ಎಂದಿಲ್ಲ. ಸಣ್ಣಪುಟ್ಟ ಹೇಳಿಕೆಗಳಿಂದ ಬಡವರ ಜೀವನಕ್ಕೆ ತೊಂದರೆ ನೀಡಬಾರದು. ಇಲಾಖೆಯ ಬಗ್ಗೆ ವ್ಯಂಗ್ಯವಾಗಿ ಮಾತನಾಡಲಾಗಿದೆ. ತಪ್ಪಿತಸ್ಥರಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಬಿಜೆಪಿ ಹಿರಿಯ ನಾಯಕರು ಹೇಳಿಕೆಕೊಡುವುದನ್ನ‌ಬಿಟ್ಟು ಪಕ್ಷ ಕಟ್ಟುವ ಬಗ್ಗೆ ಹೆಚ್ಚು ಗಮನ ಕೊಡಲಿ ಎಂದು ಕಾಲೆಳೆದರು.

ಶಾಸಕರು ಮತ್ತು ಈಧಗವರಪ್ಪನವರು ಘಟನೆ ನಡೆದಾಗ ಶಾಂತಿ ನಡೆಲೆಸುವ ರೀತಿ ವರ್ತಿಸಬೇಕು ಎಂದು ಕೋರಿದರು.

ಇದನ್ನೂ ಓದಿ-https://suddilive.in/2023/10/03/ರಾಗಿಗುಡ್ಡದಲ್ಲಿ-ಗಲಭೆ-ವಿಚಾ/

Related Articles

Leave a Reply

Your email address will not be published. Required fields are marked *

Back to top button