ಸ್ಥಳೀಯ ಸುದ್ದಿಗಳು

ಅರಂಭಗೊಂಡ ಶಿಕಾರಿ ವೀರನ ಭರ್ಜರಿ ರಥಯಾತ್ರೆ

ಸುದ್ದಿಲೈವ್/ಶಿವಮೊಗ್ಗ

ಶಿಕಾರಿ ವೀರನ ಸ್ವಾಗತಕ್ಕೆ  ಶಿಕಾರಿಪುರ ಸಜ್ಜಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಸವಳಂಗ ರಸ್ತೆಯ ಮೂಲಕ ಬರುತ್ತಿದ್ದಂತೆ  ಎಪಿಎಂಸಿ ಬಳಿ ಅಭಿಮಾನಿಗಳುಅಭಿಮಾನ ಮೆರೆದಿದ್ದಾರೆ.

ವಿಜೇಂದ್ರ ಆಗಮಿಸುತ್ತಿದ್ದಂತೆ  ಅಭಿಮಾನಿಗಳು ಅವರನ್ನ ಹೊತ್ತು ಮೆರವಣಿಗೆಗೆ ಸಜ್ಜಾಗಿದ್ದ ರಥಯಾತ್ರೆಯ ವರೆಗೆ ಹೊತ್ತು ತಂದಿದ್ದು ವಿಶೇಷವಾಗಿದೆ.

ಎಪಿಎಂಸಿ ಮಾರುಕಟ್ಟೆಯ ಬಳಿಯಿಂದ ರಥ ಯಾತ್ರೆ ಆರಂಭವಾಗಿದೆ. ಎಪಿಎಂಸಿ ಮಾರುಕಟ್ಟೆಯಿಂದ ಹುಚ್ಚರಾಯ ದೇವಸ್ಥಾನ, ರಾಘವೇಂದ್ರ ಸ್ವಾಮಿ ದೇವಸ್ಥಾನದ ವರೆಗೆ ನಡೆಯಲಿದೆ. ಇಲ್ಲಿಂದ ನಂತರ ಬಸ್ ನಿಲ್ದಾಣದ ಹತ್ತಿರ ಇರುವ  ಹಳೇ ಸಂತೆ ಮಾರುಕಟ್ಟೆಯ ಬಳಿ ಬಹಿರಂಗ ಸಭೆ ನಡೆಯಲಿದೆ.

500 ಕ್ಕೂ ಬೈಕ್ ರ್ಯಾಲಿ ನಡೆದಿದೆ. ಶಿವಮೊಗ್ಗ ವೃತ್ತದ ಬಳಿ ಪಟಾಕಿ ಸಿಡಿಸಿದ ಕಾರ್ಯಕರ್ತರು ಸಂಭ್ರಮ ಪಟ್ಟರು. ರಥಯಾತ್ರೆಯಲ್ಲಿ ಸಂಸದ ರಾಘವೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಗುರುಮೂರ್ತಿ ಮೊದಲಾದವರು ವಿಜೇಂದ್ರರಿಗೆ ಸಾಥ್ ನೀಡಿದರು.

ರಾಘವೇಂದ್ರ ಸ್ವಾಮಿ ಮಠದ ಬಳಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಹೋದರಿ ಅರುಣಾದೇವಿ ರಥಯಾತ್ರೆಯನ್ನ ಬರಮಾಡಿಕೊಂಡು ರಾಯರ ದರ್ಶನಕ್ಕೆ ಕರೆದೊಯ್ಯಲಾಯಿತು. ಈ ವೇಳೆ ಮಹಿಳೆಯರು ಪೂರ್ಣ ಕುಂಭ ಕಳಶದ ಸ್ವಾಗತ ಕೋರಿದರು.

ಇದನ್ನೂ  ಓದಿ-https://suddilive.in/archives/3975

Related Articles

Leave a Reply

Your email address will not be published. Required fields are marked *

Back to top button