ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿಯಿಂದ ಅಭ್ಯರ್ಥಿಯಾರಾಗಲಿದ್ದಾರೆ?
ಸುದ್ದಿಲೈವ್/ಶಿವಮೊಗ್ಗ
ಈಗಾಗಲೇ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ್ ಚುನಾವಣೆಗೆ ಮೂರು ತಿಂಗಳು ಇರುವ ವೇಳೆಯಲ್ಲೇ ತಮ್ಮ ಅಭ್ಯರ್ಥಿಯನ್ನ ಘೋಷಿಸಿದೆ. ಕಾಂಗ್ರೆಸ್ ಅಭ್ಯರ್ಥಿಯೂ ಸಹ ಮಿಂಚಿನ ಓಡಾಟ ಮಾಡುತ್ತಿದ್ದಾರೆ.
ಬಿಜೆಪಿಯಿಂದ ಯಾರು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಆದರೆ ಮೂಲಗಳಿಂದ ನಾಲ್ವರ ಹೆಸರು ಹೈಕಮ್ಯಾಂಡ್ ಅಂಗಳದಲ್ಲಿದೆ. ಈ ನಾಲ್ವರು ಯಾರು ಎಂಬುದು ಕುತೂಹಲ ಮೂಡಿಸಿದೆ. ಈ ನಾಲ್ವರು ಯಾರು ಎಂಬುದು ಇನ್ನೂ ಕುತೂಹಲ ಮೂಡಿಸಿದೆ.
ನಮ್ಮ ಮೂಲದ ಪ್ರಕಾರ, ಮಾಜಿ ಶಾಸಕ ರಘುಪತಿ ಭಟ್, ಸಾಗರದ ವಕೀಲ ಪ್ರವೀಣ್ ಕುಮಾರ್, ಡಾ. ಧಂಜಯ ಸರ್ಜಿ, ಗಿರೀಶ್ ಪಾಟೀಲ್ ಹೆಸರುಗಳೂ ಹೈಕಮ್ಯಾಂಡ್ ಗೆ ಶಿಫಾರಾಸಾಗಿದೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ಈಗಾಗಲೇ ಹೆಸರು ಘೋಷಿಸಿದೆ.
ಆದರೆ ಬಿಜೆಪಿ ಇನ್ನೂ ಹೆಸರು ಘೋಷಿಸಬೇಕಿದೆ. 42 ವರ್ಷದಿಂದ ಈ ಕ್ಷೇತ್ರ ಬಿಜೆಪಿ ತನ್ನ ತೆಕ್ಕೆಯಲ್ಲೇ ಇಟ್ಟುಕೊಂಡು ಬಂದಿದೆ. ಲೋಕಸಭಾ ಚುನಾವಣೆ ನಡೆದು 15 ದಿನಕ್ಕೆ 6 ಜಿಲ್ಲೆಗಳನ್ನೊಳಗೊಂಡ ಈ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿಯಲ್ಲೂ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಅಧಿಕೃತ ಘೋಷಣೆ ಯಾವಾಗ ಮತ್ತು ಯಾರಾಗಲಿದ್ದಾರೆ ಎಂಬುದು ಕಾದುನೋಡಬೇಕಿದೆ.
ಇದನ್ನೂ ಓದಿ-https://suddilive.in/archives/11541