ರಾಜ್ಯ ಸುದ್ದಿಗಳು

ಹಬ್ಬಕ್ಕೆ ಖರೀದಿ ಜೋರು

ಸುದ್ದಿಲೈವ್/ಶಿವಮೊಗ್ಗ

ದಸರಾ ಹಬ್ಬಕ್ಕೆ ಎಲ್ಲವೂ ದುಬಾರಿಯಾಗಿವೆ. ದುಬಾರಿಯ ನಡುವೆಯೂ ಖರೀದಿ ಜೋರಾಗಿದೆ. ಮಹಿಳೆಯರಿಂದ ಪೂಜಾ ಸಾಮಾಗ್ರಿಗಳಾದ ಹಣ್ಣು, ಹೂವು ಬಾಳೆಕಂದು ಖರೀದಿ ಜೋರಾಗಿದೆ.

ನಾಳೆ ಆಯುಧ ಪೂಜೆಯ ನಿಮಿತ್ತ ವಾಹನಗಳ ಪೂಜೆವಿರುವುದರಿಂದ ಹೂವು ಹಣ್ಣು, ಬಾಳೆಕಂದು, ಕುಂಬಳಕಾಯಿ ಖರೀದಿಗೆ ಜನ ಮಾರುಕಟ್ಟೆಯಲ್ಲಿ ಹೆಚ್ಚಿಗೆ ಜಮಾವಣೆಯಾಗಿದ್ದಾರೆ. ಈ ನಿಟಿನಲ್ಲಿ ಹೂವುಗಳ ಮತ್ತು ಹಣ್ಣುಗಳ ದರ ಹೆಚ್ಚಳವಾಗಿದೆ.

ಶಿವಮೊಗ್ಗದ ನಗರದ ಹೂವಿನ ಮಾರುಕಟ್ಟೆಯಲ್ಲಿ ಜನ ಂಗ
ಉಳಿ ಉಂಟಾಗಿದೆ. ನಾಳೆ ಆಯುಧ ಪೂಜೆ ಹಿನ್ನೆಲೆ ಮಾರುಕಟ್ಟೆ ಫುಲ್ ರಶ್ ಆಗಿದೆ. ಸೇವಂತಿಗೆ ಮಾರಿಗೆ ನೂರು ಮಲ್ಲಿಗೆ ಹೂವು ಮಾರಿಗೆ ನೂರು,  ಗಣಪತಿ ಹಬ್ಬಕ್ಕೆ ಈ ಸೇವಂತಿಗೆ ಕಡಿಮೆ ಇತ್ತು. ಆದರೆ ದಸರಾಕ್ಕೆ ಹೆಚ್ಚಾಗಿದೆ.  ಚೆಂಡು ಹೂವುಸಹ ಹಾರಕ್ಕೆ 50 ರೂಪಾಯಿ ನಿಗದಿಯಾಗಿದೆ ಸುಗಂಧರಾಜ200 ರಿಂದ 250 ರೂ ಆಗಿದೆ.

ಕುಂಬಳ ಸಣ್ಣ ಸೈಜಿನ ಕಾಯಿಗೆ 50 ಸ್ವಲ್ಪ ದೊಡ್ಡ ಕುಂಬಳಕ್ಕೆ 100 ರೂ. ನಿಗದಿಯಾಗಿದೆ. 20 ರೂಗೆ ಜೋಡಿ ಬಾಳೆಕಂದು ಮಾರಾಟ ಮಾಡಲಾಗುತ್ತಿದೆ. ವಾಹನಗಳಾದ‌ ಖಾಸಗಿ ಬಸ್ ಗಳು ಆಟೋ, ಗಳು ಹೂವಿನ ಅಲಂಕಾರದಿಂದ ಜಗಮಗಿಸಲಿದೆ.

ಆಯುಧ ಪೂಜೆ ನವರಾತ್ರಿ ಹಬ್ಬದ ಒಂದು ಭಾಗವಾಗಿದೆ.[೨] ಇದೊಂದು ಹಿಂದೂ ಹಬ್ಬವಾಗಿದ್ದು, ಇದನ್ನು ಸಾಂಪ್ರದಾಯಿಕವಾಗಿ ಭಾರತದಲ್ಲಿ ಆಚರಿಸಲಾಗುತ್ತದೆ. ಇದನ್ನು “ಅಸ್ಟ್ರಾ ಪೂಜಾ” ಎಂದೂ ಕರೆಯುತ್ತಾರೆ. ಸರಳವಾಗಿ ಹೇಳುವುದಾದರೆ, ಇದರ ಅರ್ಥ “ವಾದ್ಯಗಳ ಆರಾಧನೆ”. ಈ ಹಬ್ಬವು ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ೧೫ ದಿನಗಳ (ಪಂಚಾಂಗದ ಪ್ರಕಾರ) ಚಂದ್ರನ ಚಕ್ರದ ಪ್ರಕಾಶಮಾನವಾದ ಅರ್ಧದ ಒಂಬತ್ತನೇ ದಿನ ಅಥವಾ ನವಮಿಯಂದು ಬರುತ್ತದೆ ಮತ್ತು ಇದು ಜನಪ್ರಿಯವಾಗಿ ದಸರ ಅಥವಾ ನವರಾತ್ರಿ ಅಥವಾ ದುರ್ಗಾ ಪೂಜಾ ಒಂದು ಭಾಗವಾಗಿದೆ. ದಸರ ಹಬ್ಬದ ಒಂಬತ್ತನೇ ದಿನ ಶಸ್ತ್ರಾಸ್ತ್ರ ಮತ್ತು ಸಾಧನಗಳನ್ನು ಪೂಜಿಸಲಾಗುತ್ತದೆಕರ್ನಾಟಕದಲ್ಲಿ, ದುರ್ಗಾ ದೇವಿಯಿಂದ ರಾಕ್ಷಸ ರಾಜ ಮಹಿಷಾಸುರನನ್ನು ಕೊಂದ ನಂತರ, ಶಸ್ತ್ರಾಸ್ತ್ರಗಳನ್ನು ಪೂಜೆಗೆ ಇಡಲಾಗಿತ್ತು. ನವರಾತ್ರಿ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತದೆಯಾದರೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಇದನ್ನು ಆಯುಧ ಪೂಜೆ ಎಂದು ವ್ಯಾಪಕವಾಗಿ ಆಚರಿಸಲಾಗುತ್ತದೆ ಆದರೆ ಪೂಜಾ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ

ಇದನ್ನೂ ಓದಿ-https://suddilive.in/archives/1686

Related Articles

Leave a Reply

Your email address will not be published. Required fields are marked *

Back to top button