ಸ್ಥಳೀಯ ಸುದ್ದಿಗಳು

ಅ.25 ರಿಂದ ನಿಧಿಗೆ ನಾಡಕಚೇರಿ ಶುಭಾರಂಭ

ಸುದ್ದಿಲೈವ್/ಶಿವಮೊಗ್ಗ

ನಿಧಿಗೆ ಹೋಬಳಿ ನಾಡಕಚೇರಿಯನ್ನ‌ ಶಿಫ್ಟ್ ಮಾಡಲಾಗಿದೆ. ಮೂರು ವರ್ಷದ ಹಿಂದೆನೇ ಶಿಫ್ಟ್ ಆಗಬೇಕಿದ್ದ ಕಚೇರಿ ಅ. 25 ರಿಂದ ಮಲವಗೊಪ್ಪದ ಕಾಡಾ ಕಚೇರಿ ಎದುರಿಗೆ ತನ್ನ ಕರ್ತವ್ಯ ವನ್ನ ಆರಂಭಿಸಲಿದೆ.

ನಿಧಿಗೆ ಹೋಬಳಿಯ ನಾಡಕಚೇರಿಯನ್ನ ಮಲವಗೊಪ್ಪದಲ್ಲಿ  15-20 ಲಕ್ದ ವೆಚ್ಚದಲ್ಲಿ ನಿರ್ಮಿಸಿ ಆರಂಭವಾಗಬೇಕಿತ್ತು. ಆದರೆ ಈ ಕಚೇರಿಗಳು ಆರಂಭವಾಗದೆ ಧೂಳು ಹಿಡಿದಿತ್ತು. ಈ ಕಚೇರಿಯ ಕಿಟಕಿ‌ ಗ್ಲಾಜುಗಳು ಪುಡಿಯಾಗಿ ಬಿದ್ದಿದ್ದವು. ಯಾವಾಗ ಮಾಧ್ಯಮಗಳಲ್ಲಿ ಬಿತ್ತರವಾಯಿತೋ ಎಚ್ಚೆತ್ತುಕೊಂಡ ತಾಲೂಕು ಆಡಳಿತ ಈ ಕ್ರಮ ಕೈಗೊಂಡಿದೆ.

ಶಿವಮೊಗ್ಗದಲ್ಲಿ ಹೊಳಲೂರು, ಕುಂಸಿ, ಹಾರನಹಳ್ಳಿ, ಆಯನೂರು ಮತ್ತು ನಿಧಿಗೆ ನಾಡಕಚೇರಿಗಳಿವೆ. ಈ ನಾಡಕಚೇರಿಗಳಲ್ಲಿ ನಿಧಿಗೆ ಹೋಬಳಿ ನಾಡಕಚೇರಿಯನ್ನ 2018-19 ನೇ ಸಾಲಿನಲ್ಲಿ ಆರಂಭಿಸಲಾಗಿದೆ. ಆಗ ಬಾಡಿಗೆ ರೂಪದಲ್ಲಿ ಪಡೆದಿದ್ದ ನಾಡಕಚೇರಿ 2021 ರಲ್ಲಿ ಮಲವಗೊಪ್ಪದಲ್ಲಿ ಸ್ವಂತ ಕಚೇರಿಯನ್ನ ಹೊಂದಿದೆ.

2021 ರಲ್ಲೇ ನಿಧಿಗೆ ನಾಡಕಚೇರಿ ಶಿಫ್ಟ್ ಆಗಬೇಕಿತ್ತು. ಆದರೆ ಆಗಿರಲಿಲ್ಲ. ಯಾವಾಗ ಮಾಧ್ಯಮಗಳಲ್ಲಿ ನಾಡಕಚೇರಿಯ ಕುರಿತು ಬಿತ್ತರವಾಯಿತೋ ತೆರಿಗೆ ಹಣ ಪೋಲಾಗುತ್ತಿದೆ ಎಂದು ಬಿಂಬಿಸಲಾಯಿತೋ ಜಿಲ್ಲಾಡಳಿತ ಎದ್ದು ಕುಳಿತಿದೆ. ಈಗ ಕಚೇರಿ ಶಿಫ್ಟ್ ಆಗಿದ್ದು ಅ.25 ರಿಂದ ಮಲವಗೊಪ್ಪದಲ್ಲಿ ಶುಭಾರಂಭಗೊಳ್ಳುತ್ತಿದೆ.

ಇದನ್ನೂ ಓದಿ-https://suddilive.in/archives/1570

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373