ರಾಷ್ಟ್ರೀಯ ಸುದ್ದಿಗಳು

ಮೈಸೂರು-ತಾಳಗುಪ್ಪ ಕುವೆಂಪು ಎಕ್ಸ್ ಪ್ರೆಸ್ ರೈಲು 1 ಗಂಟೆ ತಡವಾಗಿ ಸಂಚಾರ, ಪ್ರಯಾಣಿಕರು ಹೈರಾಣು

ಸುದ್ದಿಲೈವ್/ಶಿವಮೊಗ್ಗ

ಮೈಸೂರಿನಿಂದ ತಾಳಗುಪ್ಪಕ್ಕೆ ಹೊರಟಿರುವ ಕುವೆಂಪು ಎಕ್ಸ್ ಪ್ರೆಸ್ ರೈಲು ನಿಗದಿತ ಸಮಯಕ್ಕಿಂತ 1 ಗಂಟೆ ತಡವಾಗಿ ಶಿವಮೊಗ್ಗ ತಲುಪುತ್ತಿದೆ.

16222 ಕ್ರಮಸಂಖ್ಯೆಯ ಕುವೆಂಪು ಎಕ್ಸ್ ಪ್ರೆಸ್ ಮೈಸೂರನಿಂದ ನಿಗದಿತ ಸಮಯ 3 ಗಂಟೆಗೆ ಹೊರಟಿದ್ದು ಅಲ್ಲಲ್ಲಿ ನಿಂತು ಚಲಿಸುತ್ತಿರುವುದರಿಂದ ಹಾಗೂ ಪಾಸಿಂಗ್ ನಿಂದಾಗಿ ತಡವಾಗಿ ಚಲಿಸುತ್ತಿರುವುದಾಗಿ ತಿಳಿದು ಬಂದಿದೆ.

6.-52 ಪಿಎಂ ಗೆ ಕಡೂರು ತಲುಪಬೇಕಿದ್ದ ಕುವೆಂಪು ಎಕ್ಸಪ್ರೆಸ್ 8-23 ಪಿಎಂ ತಲುಪಿದೆ. ರಾತ್ರಿ 8-40 ರ ಸಮಯಕ್ಕೆ ಶಿವಮೊಗ್ಗಕ್ಕೆ ಬರಬೇಕಿದ್ದ ರೈಲು 9-40 ಕ್ಕೆ ಶಿವಮೊಗ್ಗ ಟೌನ್ ತಲುಪುವ ನಿರೀಕ್ಷೆ ಇದೆ. ರಾತ್ರಿ 11- ಗಂಟೆಗೆ  ತಾಳುಗುಪ್ಪ ತಲುಪಬೇಕಿದ್ದ ರೈಲು ಮಧ್ಯರಾತ್ರಿ12-00 ಕ್ಕೆ ತಲುಪುವ ನಿರೀಕ್ಷೆ ಇದೆ. ತಡವಾಗಿ ಚಲಿಸುತ್ತಿರುವ ರೈಲಿನ  ಪ್ರಯಾಣಿಕರು ಹೈರಾಣಾಗಿದ್ದಾರೆ.

ಇದನ್ನೂ ಓದಿ-https://suddilive.in/archives/13597

Related Articles

Leave a Reply

Your email address will not be published. Required fields are marked *

Back to top button