ರಾಷ್ಟ್ರೀಯ ಸುದ್ದಿಗಳು

ಸೇನೆಯಿಂದ ವಾಪಾಸಾದ ಯೋಧನಿಗೆ ಹೃದಯ ಸ್ಪರ್ಶಿ ಸ್ವಾಗತ

ಸುದ್ದಿಲೈವ್/ಶಿವಮೊಗ್ಗ

ಸೇನೆಯಲ್ಲಿ 21 ವರ್ಷ ಸೇವೆ ಸಲ್ಲಿಸಿ ತಾಯಿನಾಡಿಗೆ ವಾಪಾಸಾಗಿರುವ ಯೋಧ ಭಾನೇಶ್ ಗೆ ಹುಟ್ಟೂರಿನ ಹೊಳೆಬೆನವಳ್ಳಿ ತಾಂಡದಲ್ಲಿ ಹೃದಯಸ್ಪರ್ಶಿ ಸ್ವಾಗತ ದೊರೆತಿದೆ.

ಉಮ್ಲಾ ನಾಯ್ಕ ಮತ್ತು ಶ್ರೀಮತಿ ರಾಧಾಬಾಯಿ ರವರ ಮಗನಾದ ಭಾನೇಶ್ ಎಂಬುವರು ಹೊಳೆಬೆನ್ನವಳ್ಳಿ ದೊಡ್ಡ ತಾಂಡದಲ್ಲಿ ಜನಿಸಿ 2೦೦3 ನೇ ಸಾಲಿನಲ್ಲಿ ಭಾರತೀಯ ಭೂಸೇನೆಗೆ ನೇಮಕರಾಗಿದ್ದರು.

ಮಹಾರಾಷ್ಟ್ರದ ನಾಸಿಕ್ ನಲ್ಲಿ ತಮ್ಮ ತರಬೇತಿಯನ್ನ ಮುಗಿಸಿ 2004 ರಿಂದ 2024 ನೇ ಸಾಲಿನವರೆಗೆ ಭಾರತ ದೇಶದ ಹಲವಾರು ರಾಜ್ಯಗಳಾದ ಪಂಜಾಬ್, ಜಮ್ಮು ಕಾಶ್ಮೀರ್,  ಸಿಕ್ಕಿಂ, ಉತ್ತರಖಂಡ್, ಹೈದರಾಬಾದ್ ಹಾಗೂ ಇತರೆ ಕಡೆಗಳಲ್ಲಿ ಸುಮಾರು 21 ವರ್ಷಗಳ ಕಾಲ ದೀರ್ಘಾವಧಿ ದೇಶ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.

ಈ ದಿನ ತಮ್ಮ ತಾಯ್ನಾಡಿಗೆ ಮರಳಿದ್ದು, ಇವರ ದೀರ್ಘ ಸೇವೆಯನ್ನು ಮೆಚ್ಚಿ ಇವರ ಸ್ನೇಹಿತ ವೃಂದದವರು ಈ ದಿನ ಅದ್ದೂರಿಯಾಗಿ ಸ್ವಾಗತವನ್ನು ಕೋರಿ ಗೌರವಿಸಿದ್ದಾರೆ.

ಇದನ್ನ ಓದಿ-https://suddilive.in/archives/8296

Related Articles

Leave a Reply

Your email address will not be published. Required fields are marked *

Back to top button