ರಾಜಕೀಯ ಸುದ್ದಿಗಳು

ಬಂಡಾಯ ಎದ್ದಿರುವ ಈಶ್ವರಪ್ಪನವರ ವಿರುದ್ಧ ಶಿಸ್ತುಕ್ರಮ

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿಯ ರಾಜ್ಯ ಶಿಸ್ತು ಸಮಿತಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪನವರನ್ನ ಪಕ್ಷದಿಂದ ಉಚ್ಚಾಟಿಸಿದೆ. ಪಕ್ಷದ ಎಲ್ಲಾ ಜವಬ್ದಾರಿಯಿಂದ ಮುಕ್ತಗೊಳಿಸಿ ಈಶ್ವರಪ್ಪರ ವಿರುದ್ಧ ಪಕ್ಷ‌ ಶಿಸ್ತುಕ್ರ‌ಮ ಜರುಗಿಸಿದೆ.

ಶಿವಮೊಗ್ಗದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಡಿಸಿಎಂ ಈಶ್ವರಪ್ಪ ಸ್ಪರ್ಧಿಸುತ್ತಿದ್ದು‌ ಅವರನ್ನ 6 ವರ್ಷಗಳ ಕಾಲ ಉಚ್ಚಾಟಿಸಿ ಪಕ್ಷ ಆದೇಶಿಸಿದೆ.

ಈಶ್ವರಪ್ಪನವರಿಗಾಗಿ ನಾಮಪತ್ರ ಹಿಂಪಡೆಯುವ ಇವತ್ತಿನವರಗೆ ಕಾದ ಪಕ್ಷ ಕ್ರಮ ಜರುಗಿಸಿದೆ. ಪುತ್ರ ಕಾಂತೇಶ್ ರಿಗೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರ ಟಿಕೇಟ್ ಸಿಕ್ಕಿಲ್ಲ ಎಂದು ಬಂಡಾಯವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದ ಈಶ್ವರಪ್ಪನವರನ್ನ ಪಕ್ಷದಲ್ಲಿಯೇ ಉಳಿಸಿಕೊಳ್ಳುವ ಅನೇಕ ಪ್ರಯತ್ನಗಳು ನಡೆದವು.

ಆದರೆ ಬಿಜೆಪಿ ಹಲವು ಪ್ರಯತ್ನ ಮಾಡಿದರೂ ಈಶ್ವರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನ  ಗಟ್ಟಿಗೊಳಿಸುತ್ತಾ ಬಂದರು. ಇಂದು ಅವರ ನಾಮಪತ್ರ ಹಿಂಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರಿಗೆ ಕಬ್ಬು ಬೆಳೆದ ರೈತನ ಚಿಹ್ನೆ ದೊರೆತಿದೆ. ಅವರ ಸ್ಪರ್ಧೆ ಅಚಲವಾಗಿದ್ದರಿಂದ ಈಗ ಪಕ್ಷದ ರಾಜ್ಯ ಶಿಸ್ತು ಸಮಿತಿ 6 ವರ್ಷಗಳ ಕಾಲ ಉಚ್ಚಾಟಿಸಿ ಆದೇಶಿದೆ.

ಇದನ್ನೂ ಓದಿ-https://suddilive.in/archives/13428

Related Articles

Leave a Reply

Your email address will not be published. Required fields are marked *

Back to top button