ರಾಜಕೀಯ ಸುದ್ದಿಗಳು

ಇನ್ನೂ ಎಷ್ಟು ಹಿಂದೂಗಳ ಹತ್ಯೆಯಾಗಬೇಕು? ಸಂಸದ ಬಿವೈರ್ ಪ್ರಶ್ನೆ

ಸುದ್ದಿಲೈವ್/ಶಿವಮೊಗ್ಗ

ಹುಬ್ಬಳ್ಳಿ ನೇಹ ಹತ್ಯಾ ಪ್ರಕರಣದಲ್ಲಿ ಹತ್ಯೆಯಾದ ನೇಹಾ ಕುಟುಂಬಕ್ಕೆ ರಕ್ಷಣೆ ನೀಡದ ರಾಜ್ಯ ಸರ್ಕಾರ ಹತ್ಯೆ ಆರೋಪಿ ಫಯಾಜ್ ಮನೆಗೆ ರಕ್ಷಣೆ ನೀಡುತ್ತಿದೆ ಎಂದು ಸಂಸದ ರಾಘವೇಂದ್ರ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇನ್ನೂ ಎಷ್ಟು ಹಿಂದೂಗಳ ಸಾವಾಗಬೇಕು ಎಂದು ಸರ್ಕಾರ ಕಾಯುತ್ತಿದೆ ಗೊತ್ತಿಲ್ಲ. ಮಡಿಕೇರಿಯ ಕುಟ್ಟಪ್ಪನಿಂದ ಹಿಡಿದು, ನೇಹಾಳ ಹತ್ಯೆಯ ವರೆಗೆ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಂಡ ಉದಾಹರಣೆಗಳು ಕಾಂಗ್ರೆಸ್ ತೆಗೆದುಕೊಂಡ ಉದಾಹರಣೆಗಳೆ ಕಾಣುತ್ತಿಲ್ಲ.‌ಇದರನ್ನ ಖಂಡಿಸಿ ನಾಳೆ 10-30 ಕ್ಕೆ ಗೋಪಿ ವೃತ್ತದಲ್ಲಿ ಬಿಜೆಪಿ ಪಕ್ಷದಿಂದ ಪ್ರತಿಭಟನೆ ನಡೆಸಲಾಗುವುದು ಎಂದರು.

ಲಕ್ಷ್ಮೀ ನಾರಾಯಣ ಅವರು ಮೋದಿ ಬಗ್ಗೆ ಹಾಡಿದ್ದಕ್ಕೆ ಹಲ್ಲೆ ನಡೆದಿದೆ, ರಾಮನವಮಿ ದಿನ ಪ್ರಸಾದ ಹಂಚುವ ವೇಳೆ ನಲ್ಲೂರಿನ ಗೋಪಿ ಮೇಲೆ ಚಾಕು ಇರಿತ ನಡೆದಿದೆ ಬಹಸಂಖ್ಯಾತರಿಗೆ ಇಲ್ಲದ ನೀತಿ ಅಲ್ಪಸಂಖ್ಯಾತರಿಗೆ ನೀಡಲಾಗುತ್ತಿದೆ.

ಸಂಘಟನೆಯ ಹಾರೈಕೆಯಿಂದ ಬಿಜೆಪಿ ಅಭ್ಯರ್ಥಯಾಗಿ ನಾಮಪತ್ರ ಸಲ್ಲಿಸಲಾಗಿದೆ ನಾಮಪತ್ರವನ್ನ ಚುನಾವಣೆ‌ ಆಯೋಗ ಸ್ವೀಕರಿಸಿದೆ ಎಂದು ತಿಳಿದು ಬಂದಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.

ಇದನ್ನೂ ಓದಿ-https://suddilive.in/archives/13276

Related Articles

Leave a Reply

Your email address will not be published. Required fields are marked *

Back to top button