ಅಡ್ರೆಸ್ ಕೇಳುವ ನೆಪದಲ್ಲಿ ಬಂದು ಬ್ಯಾಂಕ್ ಮ್ಯಾನೇಜರ್ ಗೆ ರಾಬರಿ!
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಲಗಾನ್ ಕಲ್ಯಾಣ ಮಂದಿರದ ಬಳಿ ನಡೆದುಕೊಂಡು ಹೋಗುತ್ತಿದ್ದ ಬ್ಯಾಂಜ್ ಮ್ಯಾನೇಜರ್ ಮೇಲೆ ಹಲ್ಲೆ ನಡೆದು ರಾಬರಿ ಮಾಡಲಾಗಿದೆ.
ಬೆಂಗಳೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ ಮುರುಳೀಧರ್ ಡೋಂಗ್ರೆ ಎಂಬುವರು ತಾಯಿಯ ಆಪರೇಷನ್ ಗಾಗಿ ಇಲ್ಲಿನ ಸುಬ್ಬಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಾಖಲಾದ ತಾಯಿಯನ್ನ ಡಿಸ್ಚಾರ್ಜ್ ಮಾಡಿಕೊಂಡು ಮನೆಗೆ ಕರೆದುಕೊಂಡು ಹೋಗಲು ನಿನ್ನೆ ಬೆಂಗಳೂರುನಿಂದ ಶಿವಮೊಗ್ಗಕ್ಕೆ ಬಂದಿಳಿದಿದ್ದಾರೆ.
ಸ್ವಾಮಿವಿವೇಕಾನಂದ ಬಡಾವಣೆಯಲ್ಲಿರುವ ಮನೆಗೆ ಮಹೇಂದ್ರ ಶೋರೂಂ ನಿಂದ ಪ್ರತಿ ಬಾರಿಯೂ ಶಿವಮೊಗ್ಗಕ್ಕೆ ಬಂದಾಗ ನಡೆದುಕೊಂಡು ಮನೆಗೆ ಹೋಗುವುದು ಡೋಂಗ್ರೆಯವರ ಹವ್ಯಾಸವಾಗಿತ್ತು. ನಿನ್ನೆ ಬೆಳ್ಗಿನ ಜಾವ 3-50 ರ ಸಂದರ್ಭದಲ್ಲಿ ಲಗಾನ್ ಕಲ್ಯಾಣ ಮಂದಿರದ ಬಳಿ ಆಟೋದಲ್ಲಿ ಬಂದು ಮಬೆಗೆ ನಡೆದುಕೊಂಡು ಹೋಗುವಾಗ ಓರ್ವ ಬೈಕ್ ನಲ್ಲಿ ಬಂದವ್ಯಕ್ತಿ ಶಿಕಾರಿಪುರಕ್ಕೆ ಹೋಗುವ ದಾರಿ ಕೇಳಿ ವಾಪಾಸ್ ಹೋಗಿದ್ದಾರೆ.
2-3 ನಿಮಿಷ ಬಿಟ್ಟು ಮತ್ತೆ ಅದೇ ಬೈಕ್ ನಲ್ಲಿ ಮತ್ತೆ ಬಂದ ವ್ಯಕ್ತಿಗಳಲ್ಲಿ ಹಿಂಬದಿ ಕುಳಿತ ವ್ಯಕ್ತಿ ಆಯುಧದಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ಅದನ್ನ ಡೋಂಗ್ರೆ ಎಡಗೈಯಿಂದ ತಡೆಯಲು ಹೋಗಿ ಗಾಯಗೊಂಡಿದ್ದಾರೆ. ತಕ್ಷಣವೇ ಆತನನ್ನ ತಳ್ಳಿದ್ದಾರೆ.
ಇದನ್ನು ಕಂಡ ಬೈಕ್ ನ್ನ ಚಾಲನೆ ಮಾಡಿಕೊಂಡು ಬಂದವನು ಡೋಗ್ರ ಬಳಿಯ ರೆಡ್ ಮೀ ನೋಟ್ -4 ಮೊಬೈಲ್ ಮತ್ತು ಬ್ಯಾಗ್ ನ್ನ ಕಿತ್ತುಕೊಂಡು ಹೋಗಿದ್ದಾನೆ. ಬ್ಯಾಗ್ ನಲ್ಲಿ 35 ಸಾವಿರ ರೂ. ಹಣವನ್ನ ಇಟ್ಟುಕೊಂಡು ಬಂದಿದ್ದಾಗಿ ಡೋಂಗ್ರೆ ದೂರಿನಲ್ಲಿ ದಾಖಲಿಸಿದ್ದಾರೆ. ವರ್ಷದ ಮೊದಲನೇ ಪ್ರಕರಣ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/6261