ಮತೀನ್ ತಾಹ ಮತ್ತು ಮುಸಾವೀರ್ ಬಂಧನ
ಸುದ್ದಿಲೈವ್/ಶಿವಮೊಗ್ಗ
ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ಇಬ್ಬರು ಉಗ್ರರರನ್ನ ಎನ್ ಐಎ ವಶಕ್ಕೆ ಪಡೆದಿದೆ. ಮುಸಾವೀರ್ ಮತ್ತು ಮತೀನ್ ರನ್ನ ಕೊಲ್ಕಾತಾದ ಹೊರವಲಯದ ಪೂರ್ವ ಮಿಡ್ನಾಪುರ ದಿಘಾ ಎಂಬಲ್ಲಿ ಪತ್ತೆ ಹಚ್ಚಿ ಅರೆಸ್ಟ್ ಮಾಡಲಾಗಿದೆ.
ನಕಲಿ ದಾಖಲೆ ನೀಡಿ ಬಾಡಿಗೆ ಮನೆ ಪಡೆದು ವಾಸ್ತವ್ಯ ಹೂಡಿದ್ದ ಇಬ್ವರು ಉಗ್ರರು ಹೆಸರು ಕೂಡ ಬದಲಿಸಿಕೊಂಡು ವಾಸವಿದ್ದರು. ಉಗ್ರರಾದ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವಿರ್ ಹುಸೇನ್ ಶಾಜಿಬ್ ಇಬ್ವರನ್ನ ನಿದ್ದೆಯಲ್ಲಿರುವಾಗ ಪತ್ತೆಹಚ್ಚಲಾಗಿದೆ.
ಎನ್ ಐಎ ಅಧಿಕಾರಿಗಳು ಉಗ್ರರ ವಾಸ್ತವ್ಯ ಪತ್ತೆ ಹಚ್ಚಿದ್ದರು.ಇಂದು ಬೆಳಗ್ಗಿನ ಜಾವ 2.30 ರ ಸುಮಾರಿಗೆ ಉಗ್ರರಿಂದ ಮನೆ ಮೇಲೆ ದಾಳಿ ನಡೆಸಲಾಗಿದೆ. ನಿದ್ದೆಯಲ್ಲಿದ್ದ ಇಬ್ಬರು ಉಗ್ರರನ್ನು ವಶಕ್ಕೆ ಪಡೆಯಲಾಗಿದೆ.
ಎನ್ ಐಎ ಅಧಿಕಾರಿಗಳಿಂದ ಇಬ್ಬರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಸ್ಥಳೀಯ ನ್ಯಾಯಾಲಯಕ್ಕೆ ಎನ್ ಐಎ ತಂಡ ಹಾಜರು ಪಡಿಸಲಿದೆ. ಬಳಿಕ ಬೆಂಗಳೂರಿಗೆ ಕರೆತರಲಾಗುವುದು.
ಇಂದು ಸಂಜೆ 6 ಗಂಟೆಗೆ ಉಗ್ರರನ್ನು ಬೆಂಗಳೂರಿಗೆ ಕರೆತ್ತಿದೆ. ಸಂಜೆ 6 ಗಂಟೆಗೆ ದೇವನಹಳ್ಳಿ ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಗೆ ಎನ್ ಐ ಎ ಅಧಿಕಾರಿಗಳು ಉಗ್ರರರನ್ನು ಕರೆತರಲಿದ್ದಾರೆ. ತಲೆಮೆಸಿಕೊಂಡಿದ್ದ ಮತೀನ್ ಅನೇ ವರ್ಷಗಳ ನಂತರ ಪತ್ತೆಯಾಗಿದ್ದಾನೆ.
ಇದನ್ನೂ ಓದಿ-https://suddilive.in/archives/12624