ನಾಮಪತ್ರ ಸಲ್ಲಿಸಿದ ಈಶ್ವರಪ್ಪ-ರಾಘವೇಂದ್ರರ ಸೋಲು ಖಚಿತ ಎಂದ ಮಾಜಿ ಡಿಸಿಎಂ
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಬಿಜೆಪಿ ಬಂಡಾಯ ನಾಯಕರಾಗಿ ಸಲ್ಲಿಸಿರುವ ಈಶ್ವರಪ್ಪ ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮಗಳಿಗೆ ಮಾತನಾಡಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಬಂದಿದ್ದೇನೆ.
ನಾಮಪತ್ರ ಸಲ್ಲಿಕೆಗೆ ಮೊದಲು ಬೆಂಬಲಿಗರು ಮೆರವಣಿಗೆ ನಡೆಸಿದರು. ಇಂದಿನಿಂದ ನಮ್ಮ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಹೋಗಿ ಈಶ್ವರಪ್ಪ ಏಕೆ ಚುನಾವಣೆಗೆ ನಿಂತಿದ್ದಾರೆ ಅವರಿಗೆ ಏನು ಅನ್ಯಾಯ ಆಗಿದೆ ಅಂತಾ ತಿಳಿಸುತ್ತಾರೆ ಎಂದರು.
ಒಂದೇ ಕುಟುಂಬದ ಅಪ್ಪ ಮಕ್ಕಳ ಕೈಯಲ್ಲಿ ಪಕ್ಷ ಏಕೆ ಇದೆ. ಈ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ.
ಚುನಾವಣೆ ಗೆದ್ದ ನಂತರ ಬಿಜೆಪಿಯಲ್ಲಿ ಕೆಲವು ಬದಲಾವಣೆ ಆಗ್ತದೆ. ಪಕ್ಷ ಶುದ್ದೀಕರಣ ಆಗುವ ವಿಶ್ವಾಸ ಇದೆ ಎಂದರು.
ಪಕ್ಷ ಶುದ್ದೀಕರಣಕ್ಕಾಗಿ ನನ್ನ ಸ್ಪರ್ಧೆ ಮತ್ತು ಹೋರಾಟವಿದೆ. ಕೇವಲ ಎಂಪಿ ಆಗಲು ನಾನು ಸ್ಪರ್ಧೆ ಮಾಡಿಲ್ಲ. ಹಾಲಿ ಸಂಸದ ರಾಘವೇಂದ್ರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲುತ್ತಾರೆ. ಈ ಚುನಾವಣೆ ಬಳಿಕ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಳ್ಳುತ್ತಾರೆ ಎಂದರು.
ಉಮೇದುವಾರಿಕೆ ಸಲ್ಲಿಕೆಗೂ ಮುನ್ನಾ ಈಶ್ವರಪ್ಪನವರ ಆಪ್ತ ಇ.ವಿಶ್ವಾಸ್ ಒಙದು ನಾಮಪತ್ರ ಸಲ್ಲಿಸದರೆ ನಂತರ ಖುದ್ದು ಈಶ್ವರಪ್ಪನವರೆ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಈಶ್ವರಪ್ಪ ಅವರಿಗೆ ಪತ್ನಿ ಜಯಲಕ್ಷ್ಮಿ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ವೀರಶೈವ ಮುಖಂಡ ಮಹಾಲಿಂಗಶಾಸ್ತ್ರಿ ಮೊದಲಾದ ಕಾರ್ಪೋರೇಟರ್ ಗಳು ಸಾಥ್ ನೀಡಿದರು.
ಇದನ್ಬೂ ಓದಿ-https://suddilive.in/archives/12618