ಸ್ಥಳೀಯ ಸುದ್ದಿಗಳು

ಬಾಳೆಹಣ್ಣಿನ ಮೇಲೆ ಈಶ್ವರಪ್ಪ ಮತ್ತು ಮೋದಿ 3.0 ಹೆಸರು

ಸುದ್ದಿಲೈವ್/ಸಾಗರ

ಒಂದು ಕಡೆ ಮಾಜಿ ಡಿಸಿಎಂ ಈಶ್ವರಪ್ಪನವರು ಲೋಕಸಭೆಯ ಸ್ಪರ್ಧೆ ಬಯಸಿ ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ನಡೆದಿದೆ.

ಆದರೆ ಇನ್ನೊಂದು ಕಡೆ ಸಾಗರದ ಮಹಾಗಣಪತಿ ಜಾತ್ರ ಮಹೋತ್ಸವದಲ್ಲಿ ಗಣಪತಿ ದೇವರ ರಥೋತ್ಸವದಲ್ಲಿ ಭಕ್ತರು ಬಾಳೆಹಣ್ಣಿನ ಮೇಲೆ  ಈ ಬಾರಿ ಈಶ್ವರಪ್ಪ ಮತ್ತು ಮೋದಿ 3.0 ಎಂದು ಬರೆದಿರುವುದು ಭರ್ಜರಿ ಕುತೂಹಲ ಮೂಡಿಸಿದೆ.

ಸಾಗರದಲ್ಲಿ ಇಂದು ಮಹಾಗಣಪತಿ ದೇವರ 6 ದಿನಗಳ ಜಾತ್ರೆ ನಡೆಲಿದೆ. ಇಂದಿನಿಂದ ರಥೋತ್ಸವಕ್ಕೆ ಚಾಲನೆ ನೀಡಲಾಗಿದೆ. ಎಲ್ಲಾ ಪಕ್ಷದವರ ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ಭಕ್ತರು ತಮ್ಮ ಭಕ್ತಿಯನ್ನ ತೋರುತ್ತಾರೆ.

ಸಂಸದರ ಪರವಾಗಿಯೂ ಬಾಳೆಹಣ್ಣನ್ನ ರಥೋತ್ಸವಕ್ಕೆ ಎಸೆಯಲಾಗಿದೆ. ಆದರೆ ಸಾಗರದಲ್ಲಿ ಜಾತ್ರೆಯ ವೇಳೆ ಮೋದಿ 3.0 ಮತ್ತು ಈಶ್ವರಪ್ಪನವರ ಹೆಸರು ಬರೆದಿರುವುದು ಗಮನಸೆಳೆದಿದೆ.

ಇದನ್ನೂ ಓದಿ-https://suddilive.in/archives/12604

Related Articles

Leave a Reply

Your email address will not be published. Required fields are marked *

Back to top button