ಸ್ಥಳೀಯ ಸುದ್ದಿಗಳು

ಬಜಾರ್ ನಲ್ಲಿ ಮೆರವಣಿಗೆ ಇರುವಾಗಲೆ ಈಶ್ವರಪ್ಪನವರ ಆಪ್ತ ರಿಂದ ನಾಮಪತ್ರ ಸಲ್ಲಿಕೆ


ಸುದ್ದಿಲೈವ್/ಶಿವಮೊಗ್ಗ

ಉರಿ ಬಿಸಿಲಿನಲ್ಲಿ ನಾಮಪತ್ರ ಸಲ್ಲಿಕೆಗೆ ತೆರದ ವಾಹನದಲಿ ಹೊರಟ ಮಾಜಿ ಡಿಸಿಎಂ ಈಶ್ವರಪ್ಪನವರಿಗೆ ಭರ್ಜರಿ ವೆಲ್ ಕಂ ಸಿಕ್ಕಿದೆ. ಈಶ್ವರಪ್ಪನವರ ಮೆರವಣಿಗೆಯಲ್ಲಿ ಹೂವಿನ ಮಳೆ, ಪೇಪರ್ ಬ್ಲಾಸ್ಟ್ ಗಳ ಸುರಿಮಳೆ ಆರಂಭವಾಗಿದೆ.

ಭಾರತ್ ಮಾತಾಕಿ, ಜೈಶ್ರೀರಾಮ್, ರಾಷ್ಟಭಕ್ತರ ಬಳಗದ ಅಭ್ಯರ್ಥಿ ಈಶ್ವರಪ್ಪನವರಿಗೆ ಜೈ, ಗೆಲ್ತಾರಪ್ಪ ಗೆಲ್ತಾರೆ ಈಶ್ವರಪ್ಪ ಗೆಲ್ತಾರೆ ಎಂಬ ಮೊಲಾದ ಘೋಷಣೆ, ವಾದ್ಯಗಳೊಂದಿಗೆ ಈಶ್ವರಪ್ಪ ತೆರಳಿದ್ದಾರೆ. ಮೆರವಣಿಗೆಯಲ್ಲಿ ಬಿಸಿಲಿನ ಬೇಗೆ ಆಗದಂತೆ, ಮಜ್ಜಿಗೆ, ನಿಂಬುಹುಳಿಪೇಪರ್ ಮೆಂಟ್ ಹಂಚಿಕೆ,ನೀರಿನ ಪ್ಯಾಕೆಟ್ ಹಂಚಲಾಗುತ್ತಿದೆ.

ಬಲಿಜ, ಜೈನ ಸಮಾಜ, ಹಿಂದೂಳಿದ ವರ್ಗದ ಸಮಾಜಗಳು ಸೇರಿದಂತೆ ಅನೇಕ ಸಮಾಜದವರು ದಾರಿ ಉದ್ದಕ್ಕೂ ಹೂವಿನ ಹಾರ, ಹೂವಿನ ಮಳೆಯನ್ನ ಸುರಿಯಲಾಗುತ್ತಿದೆ. ಗಾಂದೀಬಜಾರ್ ಮಸೀದಿ ಬಳಿ ಮೆರವಣಿಗೆ ತಲುಪಿದೆ. ಪೊಲೀಸರ ಭದ್ರತೆ ಸಹ ಬಿಗಿ ಭದ್ರತೆ ಒದಗಿಸಲಾಗಿದೆ. ಎರಡು ಪೊಲೀಸರ ವಾಹನ ಮತ್ತು ತುಂಗ ನಗರ ಪೊಲೀಸ್ ಠಾಎ ಪಿಐ ಮಂಜುನಾಥ್ ರನ್ನ ಭದ್ರತೆಗೆ ನಿಯೋಜಿಸಲಾಗಿದೆ.

ಈ ಮಧ್ಯೆಲೋಕಸಭಾ ಸಾರ್ವತ್ರಿಕ ಚುನಾವಣೆ -2024ರ ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕೆ‌.ಎಸ್. ಈಶ್ವರಪ್ಪ ಅವರ ಉಮೇದುವಾರಿಕೆಯನ್ನು ಕೆ.ಎಸ್.ಈಶ್ವರಪ್ಪ ಅವರ ಪರವಾಗಿ ಸೂಚಕರಾದ ವಿಶ್ವಾಸ್ ಅವರು ಶುಕ್ರವಾರ ಚುನಾವಣಾಧಿಕಾರಿಗಳಾದ ಗುರುದತ್ತ ಹೆಗಡೆ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಮಧ್ಯೆ ಈಶ್ವರಪ್ಪನವರು ಮೆರವಣಿಗೆಯಿಂದ ಇಳಿದು ಡಿಸಿ ಕಚೇರಿಗೆ ತೆರಳಿದರು.

ಇದನ್ನೂ ಓದಿ-https://suddilive.in/archives/12593

Related Articles

Leave a Reply

Your email address will not be published. Required fields are marked *

Back to top button