ಮಾ.9 ರಂದು ವಿಪ್ರ ಸಮಾಜದಿಂದ ಬಿಎಸ್ ವೈಗೆ ಸನ್ಮಾನ ಕಾರ್ಯಕ್ರಮ
ಸುದ್ದಿಲೈವ್/ಶಿವಮೊಗ್ಗ
ಮಾ.9 ರಂದು ವಿಪ್ರಸಮಾಜದಿಂದ ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರಿಗೆ ಸನ್ಮಾನ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸ್ನೇಹಬಳಗದ ನಟರಾಜ್ ಭಾಗವತ್ ಅನೇಕ ಬಾರಿ ಬಿಎಸ್ ವೈಗೆ ಸನ್ನಾನ ಕಾರ್ಯಕ್ರಮ ನ ಮುಂದೂಡಲ್ಪಟ್ಟಿವೆ. ಅಖಿಲ ಭಾರತ ಬ್ರಾಹ್ಮಣ ಸಮುದಾಯ ಸಂಘದ ಅಧ್ಯಕ್ಷ ಅಶೋಕ್ ಹಾರನಹಳ್ಳಿ ನೇತೃತ್ವದಲ್ಲಿ ನಡೆಯಲಿದೆ ಎಂದರು.
ಬಿಎಸ್ ವೈ ಜೊತೆಗೆಅವರ ಪುತ್ರ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರಿಗೂ ಸನ್ನಾನಿಸಲಾಗುವುದು. ಶನಿವಾರ ಸಂಜೆ 6-30 ಕ್ಕೆ ನಡೆಯಲಿದೆ. ಬಿಎಸ್ ವೈ ಕೇಂದ್ರೀಯ ಚುನಾವಣೆ ಮಂಡಳಿಯಲ್ಲಿರುವುದರಿಂದ ಕಾರ್ಯಕ್ರಮ ಮುಂದು ಹೋಗಿತ್ತು. ಸನ್ಮಾನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಶಾಸಕ ಚೆನ್ನಬಸಪ್ಪ ಅವರು ಮುಖ್ಯಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ವಿವರಿಸಿದರು.
ಸುದ್ದಗೋಷ್ಠಿಯಲ್ಲಿ ಸ್ನೇಹ ಬಳಗದ ಮಧುಸೂಧನ್, ಎಂ ಶಂಕರ್, ಎ.ಜೆ.ರಾಮಚಂದ್ರ, ವೆಂಕಟೇಶ್ ರಾವ್, ಸುಬ್ರಹ್ಮಣ್ಯ ಭಟ್, ಶ್ರೀನಾಥ್ ನಗರಗದ್ದೆ, ಸುರೇಖಾ ಮುರಳೀಧರ್, ಎಸ್ ಜಿ ಆನಂದ್, ಚಂದ್ರಶೇಖರ್ ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/10218