ಕುಂಚೇನಹಳ್ಳಿಯಲ್ಲಿ ಶಿವಣ್ಣ ದಂಪತಿಗಳಿಂದ ಭರ್ಜರಿ ಮತಭೇಟೆ
ಸುದ್ದಿಲೈವ್/ಶಿವಮೊಗ್ಗ
ಯುಗಾದಿ ಹಬ್ಬದ ದಿನದಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಭರ್ಜರಿ ಮತಬೇಟೆ ಮಾಡಿದ್ದರೆ. ತಾಂಡ ಸಂಸ್ಕೃತಿಯಂತೆ ಉಡುಗೆ ತೊಟ್ಟು ರೋಡ್ ಶೋನಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
ತೆರದ ವಾಹನದಲ್ಲಿ ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ರೋಡ್ ಶೋನಲ್ಲಿ ಭಾಗಿಯಾದರು. ಗೀತಾ ಶಿವರಾಜ್ ಕುಮಾರ್ ರೋಡ್ ಶೋ ನಲ್ಲಿ ಆಯನೂರು ಮಂಜುನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್ ಪ್ರಸನ್ನ ಕುಮಾರ್. ಮತ್ತು ಹಲವಾರು ಮುಖಂಡರು ಭಾಗಿಯಾದರು.
ಮೇಲಿನ ಕುಂಚೇನಹಳ್ಳಿ ತಾಂಡದಿಂದ ಕೆಳಗಿನ ಕುಂಚೇನಹಳ್ಳಿ ವರೆಗೂ ರೋಡ್ ಶೋ ನಡೆಯಿತು. ಶಿವಮೊಗ್ಗ ತಾಲ್ಲೂಕಿನ ಕುಂಚೇನಹಳ್ಳಿಯಲ್ಲಿ ಯುಗಾದಿ ಆಚರಣೆಯಲ್ಲಿ ಭಾಗವಹಿಸಿ ವಿಶಿಷ್ಟ ರೀತಿಯ ಪ್ರಚಾರ ನಡೆಸಲಾಗಿದೆ. ಲಂಬಾಣಿ ಸಮುದಾಯದ ಪ್ರಮುಖ ಹಬ್ಬ ಯುಗಾದಿ ಹಬ್ಬವನ್ನ ‘ಆಟಮ್’ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ.
ಬಂಜಾರ ಸಮುದಾಯದ ಉಡುಗೆಯಲ್ಲಿ ಗೀತಾ ಶಿವರಾಜ್ ಕುಮಾರ್ ಭಾಗಿಯಾಗಿ ಆಟಮ್ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಯಿತು. ಗೀತಾ ಶಿವರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರಿಗೆ ಗ್ರಾಮಸ್ಥರು ಸಹ ಲಂಬಾಣಿ ಸಮುದಾಯದ ಸಾಂಪ್ರದಾಯಿಕ ಸ್ವಾಗತ ನೀಡಿದರು.
ದಂಪತಿಗಳು ಸೇವಾಲಾಲ್ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದರು.ದೇವರ ದರ್ಶನದ ಬಳಿಕ ಆಟಮ್ ಹಬ್ಬದ ಆಚರಣೆ ಸಂಪ್ರದಾಯ ಚಟುವಟಿಕೆಗಳಲ್ಲಿ ಭಾಗಿಯಾದರು. ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಆಗಮಿಸುತ್ತಿರುವುದಕ್ಕೆ ಗ್ರಾಮಸ್ಥರಲ್ಲಿ ಸಂಭ್ರಮಿಸಿದರು.
ಇದನ್ನೂ ಓದಿ-https://suddilive.in/archives/12432