ಅಚ್ಚರಿ ಮೂಡಿಸಿದ ಮಾಜಿ ಗೃಹ ಸಚಿವರ ಹೇಳಿಕೆ
ಸುದ್ದಿಲೈವ್/ತೀರ್ಥಹಳ್ಳಿ
ತೀರ್ಥಹಳ್ಳಿಯಲ್ಲಿ ಬಿಜೆಪಿ ಮುಖಂಡ ಸಾಯಿವರ ಪ್ರಸಾದ್ ನನ್ನ ಎನ್ಐಎ ವಿಚಾರಣೆ ನಡೆಸಿ ಬಿಟ್ಟುಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಬಹಿರಂಗ ಸಭೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಲೋಕಸಭಾ ಚುನಾವಣೆಯ ಪ್ರಚಾರದ ಕಾರ್ಯಕ್ರಮದಲ್ಲಿ ಮಾತನಾಡಿರುವ ಮಾಜಿ ಗೃಹಸಚಿವರ ಹೇಳಿಕೆ ಅಚ್ಚರಿ ಮೂಡಿಸಿದೆ. ಅವರ ಹೇಳಿಕೆಗೆ ತನಿಖಾ ದಳವೇ ಬೆಚ್ಚಿಬೀಳುವಂತಿದೆ.
ಅವರ ಭಾಷಣದ ಮುಖ್ಯಂಶಗಳು ಹೀಗಿವೆ.ರಾಷ್ಟ್ರ ಕವಿ ಕುವೆಂಪು, ಯು ಆರ್ ಅನಂತಮೂರ್ತಿ, ಗೋಪಾಲಗೌಡರ ಹೆಸರು ತೀರ್ಥಹಳ್ಳಿಯಲ್ಲಿ ಕೇಳುತ್ತಿದ್ದೆವು ಆದರೆ ಈಗ ಬಾಂಬ್ ಮಾಡುವ ರಾಷ್ಟ್ರ ದ್ರೋಹಿಗಳಿಂದ ದಿನ ನಿತ್ಯ ನಾವು ಮಾಧ್ಯಮಗಳಲ್ಲಿ ತೀರ್ಥಹಳ್ಳಿ ಹೆಸರು ಕೇಳುವಂತಾಗಿದೆ.
ಇವತ್ತು ಬೆಳ್ಳಂ ಬೆಳಗ್ಗೆ ಬಿಜೆಪಿ ಮುಖಂಡನ ಬಂಧನ ಆಗಿದೆ ಎನ್ನುತ್ತಾರೆ. ಮುಸ್ಲಿಂ ವ್ಯಕ್ತಿಯ ಅಂಗಡಿಯಲ್ಲಿ ಮೊಬೈಲ್ ಖರೀದಿ ಮಾಡಿದ್ದಕ್ಕೆ ಅವನ ಹೆಸರಲ್ಲಿ ಫೇಕ್ ಅಕೌಂಟ್ ಮಾಡಿದ್ದಾರೆ. ಇನ್ನು 8 ಜನ ಹಿಂದೂ ಮಂದಿಯ ಹೆಸರಲ್ಲಿ ಸಿಮ್ ಕ್ರಿಯೇಟ್ ಮಾಡಿದ್ದಾರೆ.
ಕಾಂಗ್ರೆಸ್ ನವರು ಕೇಳುತ್ತಿದ್ದರು ನಿಮ್ಮ ಕಾರ್ಯಕರ್ತ ಅಂತ. ಆದರೆ ಅದೇ ಬಾಂಬ್ ಇಟ್ಟವನ ಜಾಗದಲ್ಲಿ ನೀವು 10 ಲಕ್ಷ ಕೊಟ್ಟು ಕಾಂಗ್ರೆಸ್ ಪಾರ್ಟಿ ಆಫೀಸ್ ಮಾಡಿದ್ದೀರಾ ಎಂದು ಆಗರ ವಾಗ್ದಾಳಿ ನಡೆಸಿದ್ದಾರೆ. ಇಷ್ಟೊಂದು ವಿಷಯ ಸತ್ಯವಾಗಿದ್ದರೆ ತನಿಖಾದಳ ಮುಂದೆ ಹೇಳದೆ ಬಹಿರಂಗ ಸಭೆಯಲ್ಲಿ ಮಾಜಿ ಸಚಿವರು ಹೇಳಿರುವುದು ಅಚ್ಚರಿ ಮೂಡಿಸಿದೆ.
ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂದು ಕಾಂಗ್ರೆಸ್ ನವರು ಹೇಳುತ್ತಾರೆ. ಆದರೆ ನಾವು ಕುಕ್ಕರ್ ಬಾಂಬ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ದೇಶ ದ್ರೋಹಿಗಳ ವಿಷಯದಲ್ಲಿ ಎನ್ಐಎ ಈಗ ತಾಯಿ ಬೇರನ್ನು ಕೂಡ ಹುಡುಕುತ್ತಿದೆ. ನಿಮ್ಮ ಹಾಗೆ ಎಫ್ಐಆರ್ ಹಾಕಿ ಕೂರುವುದಿಲ್ಲ. ಯಾರನ್ನು ನಾವು ಬಿಡುವುದಿಲ್ಲ ಎಂದರು.
ಇದನ್ನೂ ಓದಿ-https://suddilive.in/archives/12191