ಅಹಿಂದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷರಾಗಿ ಜಿಡಿ ಮಂಜುನಾಥ್ ನೇಮಕ
ಸುದ್ದಿಲೈವ್/ಶಿವಮೊಗ್ಗ
ಸಚಿವ ಮಧು ಬಂಗಾರಪ್ಪನವರ ಆಪ್ತ, ಮಂಜುನಾಥ್ ಜಿ.ಡಿ ಅವರನ್ನ ಕರ್ನಾಟಕ ರಾಜ್ಯ ಅಹಿಂದದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷರಾಗಿ ನೇಮಿಲಾಗಿದೆ.
ಮಂಜುನಾಥ್ ಜಿ.ಡಿ ಆದ ನಿಮ್ಮನ್ನು ಕರ್ನಾಟಕ ರಾಜ್ಯ ಅಹಿಂದ (ಅಲ್ಪಸಂಖ್ಯಾತರ, ಹಿಂದುಳಿದವರ, ದಲಿತ ಒಕ್ಕೂಟ) ಶಿವಮೊಗ್ಗ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿ ಆದೇಶಸಲಾಗಿದೆ.
ಕರ್ನಾಟಕ ಅಹಿಂದ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಶ್ರೀ ಪ್ರಭುಲಿಂಗ ಎಲ್. ದೊಡ್ಡಿಣಿ ರವರು ನಿರ್ದೇಶನ ಮೇರೆಗೆ ನೇಮಕಾತಿ ಮಾಡಲಾಗಿದ್ದು, ಅಹಿಂದ ಒಕ್ಕೂಟದ ಸಿದ್ಧಾಂತಗಳಿಗೆ ಬದ್ದರಾಗಿ ಅಹಿಂದ ಸಂಘಟನೆಗೆ ಹೆಚ್ಚಿನ ಒತ್ತುಕೊಟ್ಟು ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರತವಾಗಿ ಅಹಿಂದ ಸಂಘಟನೆಯಲ್ಲಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತಷ್ಟು ಸದೃಡವಾಗಿ ಮುನ್ನಡೆಸಲು ಕಾರ್ಯನಿರ್ವಹಿಸಬೇಕೆಂದು ಅಹಿಂದ ಜಿಲ್ಲಾ ಘಟಕದ ಅಧ್ಯಕ್ಷರಾದ ಚಂದ್ರಭೂಪಾಲ್ ಸೂಚನೆ ನೀಡಿದ್ದಾರೆ.
ಅಹಿಂದ ಶಿವಮೊಗ್ಗ ಜಿಲ್ಲಾ ಘಟಕ ನೀಡುವ ಸೂಚನೆ ಮತ್ತು ಆದೇಶಗಳ ಅನುಸಾರವಾಗಿ ಜವಾಬ್ದಾರಿ ಮತ್ತು ನೀತಿ ನಿರೋಪನೆಗಳು ಉಲ್ಲಂಘನೆಯಾಗದಂತೆ ಕರ್ತವ್ಯ ನಿರ್ವಹಿಸಲು ಅಹಿಂದ ಸಂಘಟನೆಗೆ ಇಂದಿನಿಂದಲೇ ತೊಡಗಿಸಿಕೊಂಡು ಕಾರ್ಯೋನ್ಮುಖರಾಗಬೇಕೆಂದು ಹಾಗೂ ಅಹಿಂದ ಶಿವಮೊಗ್ಗ ಜಿಲ್ಲಾ ಘಟಕದ ಜೊತೆಯಲ್ಲಿ ನಿರಂತರ ಸಂಪರ್ಕದಲ್ಲಿರುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ-https://suddilive.in/archives/12159