ಕ್ರೈಂ ನ್ಯೂಸ್
ಮಾಳೂರು ಪೊಲೀಸ್ ಠಾಣೆ ಸಬ್ ಇನ್ ಸ್ಪೆಕ್ಟರ್ ಅಮಾನತು
ಸುದ್ದಿಲೈವ್/ಶಿವಮೊಗ್ಗ
ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಸಬ್ ಇನ್ ಸ್ಪೆಕ್ಟರ್ ರನ್ನ ಅಮಾನತ್ತುಗೊಳಿಸಲಾಗಿದೆ.
ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಲುಕೊಪ್ಪದಲ್ಲಿ ಅಕ್ರಮ ನಾಟ ಸಂಗ್ರಹವಾಗಿತ್ತು. ಸಂಗ್ರಹವಾದ ನಾಟಗಳ ವಿಚಾರದಲ್ಲಿ ಸರಿಯಾದ ಸೂಪರ್ ವಿಷನ್ ನಡೆಸ ಸಿದ್ದಪ್ಪ ಎಂಬುವರನ್ನ ಎಸ್ಪಿ ಮಿಥುನ್ ಕುಮಾರ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಎಸ್ಪಿ ಮಿಥುನ್ ಕುಮಾರ್ ಎರಡು ದಿನಗಳ ಹಿಂದೆ ಕರ್ತವ್ಯ ಲೋಪವೆಸಗಿರುವ ಸಬ್ ಇನ್ ಇನ್ ಸ್ಪೆಕ್ಟರ್ ಸಿದ್ದಪ್ಪರನ್ನ ಕರ್ತವ್ಯದಿಂದ ಅನಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
2022 ರಲ್ಲಿ ಇಲ್ಲಿ ಸಬ್ ಇನ್ ಸ್ಪೆಕ್ಟರ್ ಜಯಪ್ಪ ನಾಯಕ್ ಎಂಬುವರು ಅಮಾನತ್ತು ಗೊಂಡಿದ್ದರು.
ಇದನ್ನೂ ಓದಿ-https://suddilive.in/archives/12807