ರಾಜಕೀಯ ಸುದ್ದಿಗಳು

ಗೊಂದಲ ಮೂಡಿಸುವುದೇ ಫೈರ್ ಬ್ರಾಂಡ್ ಕೆಲಸ-ಬೇಳೂರು

ಸುದ್ದಿಲೈವ್/ಸಾಗರ

ಬಿಜೆಪಿಯ ಸಂಸದರ ಅನಂತ ಕುಮಾರ್ ಹೆಗಡೆಯವರು ಸಿಎಂ ಸಿದ್ದರಾಯ್ಯನವರ ವಿರುದ್ಧ ಏಕವಚನ ಪದಪ್ರಯೋಗ ಮಾಡಿದ್ದರ ಬೆನ್ನಲ್ಲೇ ಕಾಂಗ್ರೆಸ್ ಅವರ ಮೇಲೆ ಮುಗಿಬಿದ್ದಿದೆ. ಅವರ ಮೇಲೆ ಕುಮಟಾ ಪೊಲೀದ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಆದರೆ ರಾಜಕೀಯವಾಗಿ ಕಾಂಗ್ರೆಸ್ ಅವರ ವಿರುದ್ಧ ಟೀಕೆಗಳ ಮಹಾಪೂರವನ್ನೇ ಹರಿಸಿದೆ. ಕಳೆದ ಮೂರು ವರ್ಷ ಯಾವುದೇ ರಾಜಕೀಯ ವೇದಿಕೆಯಲ್ಲಿ ಕಾಣಿಸಿಕೊಳ್ಳದ ಅನಂತ ಕುಮಾರ್ ಹೆಗಡೆ ಸಿದ್ದರಾಮಯ್ಯನವರನ್ನ ಟೀಕಿಸುವ ಮೂಲಕ ಕಾಂಗ್ರೆಸ್ ಗೆ ಟೀಕಾಪ್ರಹಾರ ಮಾಡಲು ಅಸ್ತ್ರವನ್ನ ಕೊಟ್ರಾ ಎಂಬ ಶಂಕೆ ವ್ಯಕ್ತವಾಗಿದೆ.

ಅವರ ಹೇಳಿಕೆ ಕುರಿತು ಶಾಸಕ ಗೋಪಾಲಕೃಷ್ಣ ಬೇಳೂರು ಸಹ ಹೆಗಡೆಯವರನ್ನ‌ಅವರದ್ದೇ ಭಾಷೆಯಲ್ಲಿ‌ ಟೀಕಿಸಿದ್ದಾರೆ. ಅನಂತ್ ಕುಮಾರ್ ಹೆಗಡೆ ರವರ ಸ್ವಲ್ಪ ಆರೋಗ್ಯ ಸರಿ ಇಲ್ಲದೆ ಇರುವ ಕಾರಣದಿಂದ ನಾನು ಅವರ ವಿರುದ್ಧ ಹೆಚ್ಚು ಮಾತನಾಡುವುದಿಲ್ಲ ಕಾರಣ ಅನಾರೋಗ್ಯದಿಂದ ಸಂಸದರು ಸ್ಥಿಮಿತ ಕಳೆದುಕೊಂಡಿರುವುದಾಗಿ ಆರೋಪಿಸಿದ್ದಾರೆ.

ಅವರಿಗೆ ಮಾನಸಿಕವಾಗಿ ಏನಾಗಿದೆ ಗೊತ್ತಿಲ್ಲ. ಮುಂಚಿನಿಂದ ಫೈಯರ್ ಬ್ರಾಂಡ್ ಎಂದು ಗುರುತಿಸಿಕೊಂಡವರು. ಗೊಂದಲ ಮಾಡುವುದು ಗೊಂದಲ ಸೃಷ್ಟಿಸುವುದು ಅವರ ಗುಣ ಎಂದು ಟೀಕಿಸಿದರು.‌

ನಮಗೂ ಕೆಟ್ಟದಾಗಿ ಬೈಯೋಕೆ ಬರುತ್ತೆ. ಬೇಲೂರಿಗೆ ಕೆಟ್ಟದಾಗಿ ಬೈಯುವುದು ಹೇಳಿಕೊಡುವುದು ಬೇಡ. ಒಬ್ಬ ಎಂಪಿಯಾದ ವ್ಯಕ್ತಿ ಮುಖ್ಯಮಂತ್ರಿಗಳ ಬಗ್ಗೆ ಏನು ಹೇಳಬೇಕು ಎಂದು ಯೋಚನೆ ಮಾಡಬೇಕಿತ್ತು. ಬಿಜೆಪಿಯವರ ಸ್ವಾಭಿಮಾನ ತತ್ವ ಸಂಸ್ಕೃತಿ ಎಲ್ಲಿ ಹೋಯಿತು ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ-https://suddilive.in/archives/6962

Related Articles

Leave a Reply

Your email address will not be published. Required fields are marked *

Back to top button