ಕ್ರೈಂ ನ್ಯೂಸ್

ಶಿವಮೊಗ್ಗದಲ್ಲಿ ಲೋಕಾಯುಕ್ತ ದಾಳಿ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಒಂದುಕಡೆ ಎನ್ಐಎ ದಾಳಿಯಾದರೆ, ಬೆಂಗಳೂರಿನ ಲೋಕಾಯುಕ್ತರು ಶಿವಮೊಗ್ಗದ ಗಾಂಧಿ ಬಜಾರ್ ನ ಮನೆಯೊಂದರಲ್ಲಿ ತಪಾಸಣೆ ನಡೆಸಿದ್ದಾರೆ.

ಬಜಾರ್ ನ ಕರಿದೇವರ ಕೇರಿಯಲ್ಲಿರುವ ಮನೆಯೊಂದರಲ್ಲ ತಪಾಸಣೆ ನಡೆಸಿರುವ ಬೆಂಗಳೂರು ಲೋಕಾಯುಕ್ತರು ಎರಡು ಬೊಲೆರೋದಲ್ಲಿ 8 ಅಧಿಕಾರಿಗಳು ರಂಗನಾಥ ನಿಲಯದಲ್ಲಿ ಐದನೇ ಅಂತಸ್ಥಿನ ಮನೆಯೊಂದರಲ್ಲಿ  ತಪಾಸಣೆ ನಡೆಸುತ್ತಿದ್ದಾರೆ.

ಬಿಬಿಎಂಪಿ ಇಂಜಿನಿಯರ್ ಅವರಿಗೆ ಸಂಬಂಧಿಸಿದ  ಕಟ್ಟಡವಾದ ಕಾರಣ ತಪಾಸಣೆ ನಡೆಸಿರುವ ಲೋಕಾಯುಕ್ತರು ಇಂಜಿನಿಯರ್ ಅವರ ಹೆಸರು ಹೇಳಲು  ನಿರಾಕರಿಸಿದ್ದಾರೆ.

ಅದರಂತೆ ಹೊಸನಗರ ತಾಲೂಕಿನ‌ ಮಳಲಿ ಗ್ರಾಮದ ಕಾರವಾರ ಜಿಲ್ಲೆಯ ಅಬಕಾರಿ ಅಧಿಕಾರಿಯ ತೋಟದ ಮನೆಯ ಮೇಲೂ ದಾಳಿಯಾಗಿದೆ. ಶಿವಮೊಗ್ಗದ ಗಾಂಧಿ ಬಜಾರ್ ನ ಮನೆಯ ಮೇಲೆ ನಡೆದ ದಾಳಿಯ ವೇಳೆ ಬೀಗ ಒಡೆಯುವ ಹಾಗೂ ಚಿನ್ನಾಭರಣ ತೂಕ ಮಾಡುವ ಖಾಸಗಿ ವ್ಯಕ್ತಿಗಳನ್ನ ಕರೆತರಲಾಗಿದೆ.

ಇದನ್ನೂ ಓದಿ-https://suddilive.in/archives/11570

Related Articles

Leave a Reply

Your email address will not be published. Required fields are marked *

Back to top button