ರೌಡಿಶೀಟರ್ ಒಲಂಗನ ಕಾಲಿಗೆ ಗುಂಡು
ಸುದ್ದಿಲೈವ್/ಶಿವಮೊಗ್ಗ
ನಗರದ ರೌಡಿಶೀಟರ್ ಒಲಂಗನ ಕಾಲಿಗೆ ಗುಂಡೇಟು ಬಿದ್ದಿದೆ. ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾದ ರೌಡಿಶೀಟರ್ ಒಲಂಗನ ಮೇಲೆ ಜಯನಗರ ಪಿಐ ಸ್ವಯಂ ರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ.
ಎರಡು ದಿನಗಳ ಹಿಂದೆ ಶಿವಮೊಗ್ಗದ ಫ್ರೀಡಂಪಾರ್ಕ್ ನಲ್ಲಿ ಶಶಿ ಎಂಬಾತನ ಮೇಲೆ ಮಂಜುನಾಥ್ ಯಾನೆ ಒಲಂಗ, ಮಂಜುನಾಥ್ ಯಾನೆ ನೇಪಾಳಿ ಮಂಜ, ಸಂದೀಪ ಮಲ್ಲೇಶ ಯಾನೆ ಮಲ್ಲಿ, ಕರಿಯಾ ವಿನಿ ಮತ್ತು ಇತರರು ಚಾಕುವಿನಿಂದ ಇರಿದು ಕೊಲೆ ಯತ್ನ ನಡೆಸಿದ್ದರು.
ಸಧ್ಯಕ್ಕೆ ಚಾಕು ಇರಿತಕ್ಕೆ ಒಳಗಾದ ಶಶಿ ಬಜಾವ್ ಆಗಿದ್ದಾನೆ. ಡಿ.24 ರಂದು ಜಟಪಟ್ ನಗರದಲ್ಲಿ ನಡೆದ ಆರ್ಕೇಸ್ಟ್ರಾದಲ್ಲಿ ಮಂಜುನಾಥ್ ಯನೆ ಒಲಂಗ ಮಂಜನ ಗ್ಯಾಂಗ್ ಶಶಿಯನ್ನ ಕಂಡು ಹಳೇದ್ವೇಷದಿಂದ ಆರ್ಕೇಸ್ಟ್ರಾಕ್ಕೆ ಯಾಕೆ ಬಂದಿದ್ದೀಯ? ಎಂದು ಹೇಳಿ ಚಾಕುವಿನಿಂದ ಇರಿದಿರುವುದಾಗಿ ಜಯಮಗರ ಪೊಲೀಸ್ ಠಾಣೆಯಲ್ಲಿದೂರು ದಾಖಲಾಗಿತ್ತು.
ದೂರು ದಾಖಲಾದ ಬೆನ್ನಲ್ಲೇ ನಿನ್ನೆ ಜಯನಗರ ಪೊಲೀಸರು ಬಂಧಿಸಿ ಇಂದು ಬೆಳಿಗ್ಗೆ ಆಯುಧಗಳನ್ನ ಮಹಜರ್ ಮಾಡಲುಹೋದಾಗ ರವಿ ಎಂಬಾತನ ಪೊಲೀಸ್ ಸಿಬ್ಬಂದಿಗೆ ಡ್ರಾಗರ್ ನಿಂದ ದಾಳಿನಡೆಸಿದ್ದಾನೆ. ದಾಳಿಯಲ್ಲಿ ರವಿ ಗಾಯಗೊಂಡಿದ್ದಾನೆ. ಪಿಐ ಸಿದ್ದೇಗೌಡ ಎಚ್ಚರಿಸಿದರೂ ಕೇಳದೆ ರವಿಮೇಲೆ ದಾಳಿ ನಡೆಸಿದ್ದಾನೆ.
ಗಾಳಿಯಲ್ಲಿ ಗುಂಡು ಮೊಳಗಿಸಿದರೂ ಕೇಳದ ಮಂಜನ ಮೇಲೆ ಪಿಐ ಸಿದ್ದೇಗೌಡರು ಸ್ವಯಂ ರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿ ರವಿ ಮತ್ತು ಒಲಂಗನನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ-https://suddilive.in/archives/5613