“ಯೋ ಬರ್ಕೊ ಶಿವಮೊಗ್ಗ ನಂದೆ” ಎಂದ ಶಿವಣ್ಣ
ಸುದ್ದಿಲೈವ್/ಶಿವಮೊಗ್ಗ
ಸೇವೆಯ ಹೆಮ್ಮೆ ಇದೆ. ಒಂದು ವರ್ಷದ ಹಿಂದೆ ಗ್ಯಾರೆಂಟಿ ಕಾರ್ಡ್ ತಂದಿದ್ವಿ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದೇವೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸಂತೆ ಕಡೂರಿನಲ್ಲಿ ಕಾಂಗ್ರೆಸ್ ನ ಲೋಕಸಭಾ ಚುನಾವಣೆಯ ಸಭೆಯಲ್ಲಿ ಭಾಗಿಯಾಗಿ ಮಾತನಾಡಿ, ಮತ್ತೆ ಒಙದು ವರ್ಷದ ನಂತರ ಇಂದು ಮತ್ತೆ ನಿಮ್ಮ ಮುಂದೆ ಬಂದಿದ್ದೇವೆ. ಸೇವೆಯನ್ನ ಮುಂದುವರೆಸಲು ಮತ್ತೆ ಬಂದಿದ್ದೇವೆ ಎಂದರು.
ಗದ್ದೆ ಹಸಿರಾಗಲು ಬಂಗಾರಪ್ಪನವರ ಉಚಿತ ವಿದ್ಯುತ್ ಯೋಜನೆ ಕಾರಣ, ಕಾಂಗ್ರೆಸ್ ಹೊಟ್ಟೆಗೆ ಅನ್ನಕೊಟ್ಟವರು. ರಾಮ ಹನುಮ ಎಂದು ಬಿಜೆಪಿ ಬರುತ್ತದೆ. ಆದರೆ ಹಸಿವಿನ ಹೋರಾಟದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ನಿಲ್ಲುತ್ತದೆ ಎಂದರು.
ಗೀತಾ ಶಿವರಾಜ್ ಕುಮಾರ್ ಮಾತು
ಶಿವಮೊಗ್ಗದ ಧ್ವನಿಯಾಗಿ ಗೀತ ಶಿವರಾಜ್ ಕುಮಾರ್ ಸಂಸತ್ ನಲ್ಲಿ ಕೊಡ್ತಾರೆ. ಅವರ ವಿರುದ್ಧ ಟೀಕಾ ಟಿಪ್ಪಣಿ ಮಾಡಲಾಗುತ್ತಿದೆ. ಆದರೆ ಮೇ. 7 ರಂದು ಮತಗಳ ಮೂಲಕ ಉತ್ತರಿಸಬೇಕು ಎಂದು ಹೇಳಿದರು.
ನನಗೆ ಮತ ಹಾಕಲೇ ಬೇಕು. ನಾನು ಈ ಜಿಲ್ಲೆಯ ಮಗಳು ಖಾಲಿ ಕೈಯಲ್ಲಿ ಕಳುಹಿಸುವ ಹಾಗಿಲ್ಲ. ಕಳೆದ ಬಾರಿ ಸೋತಿದ್ದೇವೆ. ಈ ಬಾರಿ ನೀವು ಬರಿಗೈಯಲ್ಲಿ ಕಳುಹಿಸೊಲ್ಲ ಎಂದು ಭಾವಿಸಿರುವೆ ಎಂದು ಹೇಳಿದರು.
ನಾನು ಗೆದ್ದರೆ ನಿಮ್ಮ ಧ್ವನಿಯಾಗಿರುತ್ತೇನೆ. ಮಧು ಶಿಕ್ಷಣ ಸಚಿವರಾದಾಗ ಪತ್ರ ಬರೆದು ಸೆಕೆಂಟ್ ಪಿಯುಸಿ ಅವರಿಗೆ ಕೌನ್ಸಿಲ್ ಆರಂಭಿಸಿ ಎಂದಿರುವೆ ಅದನ್ನ ಜಾರಿಗೊಳಿಸಿದ್ದಾರೆ ಎಂದರು.
ಡೈಲಾಗ್ ಹೊಡೆದ ಶಿವಣ್ಣ
ನಟ ಶಿವರಾಜ್ ಕುಮಾರ್ ಮಾತನಾಡಿ, ನಿಮ್ನೂರ ಮಗಳು ಗೀತ, ನನಗಿಂತ ಹೆಚ್ಚಿನ ಭರವಸೆ ನಿಮಗೆ ಇರಬೇಕು. ನಾನುಮದುವೆಯಾಗಿ 38 ವರ್ಷ ಕಳೆದಿದ್ದೇವೆ. ಮಹಿಳೆ ಆಗಿ ಸ್ಪರ್ಧಿಸುತ್ತಿದ್ದಾರೆ. ಒಮ್ಮೆ ಅವಕಾಶಕೊಡಿ. ನಿಮ್ಮ ಸೇವೆ ಮಾಡುತ್ತಾರೆ ಎಂದರು.
ನನಗೆ ರಾಜಕೀಯ ಬ್ಲಡ್ ನಲ್ಲಿ ಇಲ್ಲ. ಗೀತಾ ಬಂಗಾರಪ್ಪನವರ ಮಗಳು. ಅವರಿಗೆ ರಾಜಕಾರಣ ಬ್ಲಡ್ ನಲ್ಲಿದೆ. ಹೆಣ್ಣು ತವರಿಗೆ ಬಂದಾಗ ಕಾಣಿಕೆ ಉಡುಗರೆ ಕೊಡ್ತಾರೆ. ತವರಿಗೆ ಬಂದಿದ್ದಾರೆ. ಎಂಪಿ ಆಗಿ ಗೆಲ್ಲಿಸಿ ಉಡುಗರೆ ಕೊಡಬಾರದು ಎಂದು ತಿಳಿಸಿದರು.
ಸಭೀಕರು ಹಾಡಬೇಕು ಎಂದು ಶಿವಣ್ಣರಿಗೆ ಒತ್ತಾಯಿಸಿದರು. ಗೀತಾರನ್ನ ಗೆಲ್ಲಿಸಿ 24 ಗಂಟೆನೂ ಹಾಡ್ತೀನಿ, ಕುಣಿತಿನಿ ಎಂದು ಭವಸೆ ನೀಡದರು. ಆದರೆ ಸಭೀಕರ ಒತ್ತಾಸೆಗೆ ಡೈಲಾಗ್ ಹೊಡೆದರು. “ಯೋ ಬರ್ಕೊಯ್ಯ ಮುಂದುಗಡೆ ಬರ್ಕೊ, ಶಿವಮೊಗ್ಗ ನನ್ದಡ ಎಂಬ ಡೈಲಾಗ್ ಹೊಡೆದರು”
ಇದನ್ನೂ ಓದಿ-https://suddilive.in/archives/11405