ಕ್ರೈಂ ನ್ಯೂಸ್

ಹದಿಹರಿಯದ ಯುವಕ ಅಪಘಾತದಲ್ಲಿ ಸಾವು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ನಗರದ ನವುಲೆಯ ಬಳಿ ಭೀಕರ ಅಪಘಾತ ಆಗಿದ್ದು ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಈ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಕೆಟಿಎಂ ಗಾಡಿಯಲ್ಲಿ ಬರುತ್ತಿದ್ದ ಕಾಶಿಪುರದ ನಿವಾಸಿ ಜೆ ಎನ್ ಸಿ ಸಿ ಇ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ ಪುನೀತ್ ಎಂಬ 20 ವರ್ಷದ ಯುವಕ ಸಾವನ್ನಪ್ಪಿದ್ದಾನೆ.

ಎದುರಿಗೆ ಪ್ಯಾಶನ್ ಪ್ರೊ ನಲ್ಲಿ ಬರುತ್ತಿದ್ದ ಇನ್ನರ್ವ ಬೈಕ್ ಸವಾರ ಅಡ್ಡ ಬಂದ ಕಾರಣ ಬ್ರೇಕ್ ಹಾಕಲು ಹೋದ ಯುವಕನಿಗೆ ವಾಹನ ನಿಯಂತ್ರಣಕ್ಕೆ ಸಿಗದೆ  ಡಿಕ್ಕಿಯಾಗಿದೆ. ಕೆಳಗೆ ಬಿದ್ದ ಯುವಕನ ತಲೆ ಮೇಲೆ ಬೊಲೆರೋ ವಾಹನ ಹರಿದ ಪರಿಣಾಮ  ಪುನೀತ್ ಸಾವನ್ನಪ್ಪಿದ್ದಾನೆ. ಪೂರ್ವ ಸಂವಾರಿ ಪೊಲೀಸ್ ಠಾಣೆಯಲ್ಲಿ ದೂರು‌ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/11295

Related Articles

Leave a Reply

Your email address will not be published. Required fields are marked *

Back to top button