ಕ್ರೈಂ ನ್ಯೂಸ್
ಬ್ಯಾಂಕ್ ನಲ್ಲಿ ಕಳ್ಳತನಕ್ಕೆ ಯತ್ನ
ಸುದ್ದಿಲೈವ್/ಶಿವಮೊಗ್ಗ
ಎಪಿಎಂಸಿಯಲ್ಲಿರುವ ಕರ್ನಾಟಕ ಬ್ಯಾಂಕ್ ನಲ್ಲಿ ಕಳುವಿನ ಯತ್ನ ನಡೆದಿದೆ. ಬ್ಯಾಂಕ್ ನ ಕ್ಯಾಶ್ ಕೌಂಟರ್ ನ್ನ ಹಾನಿ ಮಾಡಲಾಗಿದೆ.
ಸ್ಟ್ರಾಂಗ್ ರೂಮ್ ನಲ್ಲಿ ಹಣವನ್ನ ಇಟ್ಟಿದ್ದರಿಂದ ಯಾವುದೇ ಹಣ ಅಥವ ಚಿನ್ನಾಭರಣ ಕಳುವಾಗಿಲ್ಲ. ಆದರೆ ಕಳುವಿನ ಯತ್ನ ನಡೆದಿದೆ ಎಂದು ಅಸಿಸ್ಟೆಂಟ್ ಮ್ಯಾನೇಜರ್ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬ್ಯಾಂಕಿನ ಕಿಟಕಿಯನ್ನ ಮುರಿದು ಬ್ಯಾಂಕ್ ಒಳಗೆ ನುಗ್ಗಿರುವ ಕಳ್ಳ ಕ್ಯಾಶ್ ಕೌಂಟರ್ ಹಾನಿ ಮಾಡಿ ನಂತರ ಸ್ಟ್ರಾಂಗ್ ರೂಮ್ ಒಳಗೆ ನುಗ್ಗಲು ವಿಫಲ ಯತ್ನ ನಡೆಸಿದ್ದಾನೆ. ಬ್ಯಾಂಕ್ ನ ಫೈಲ್ ಗಳನ್ನ ಚೆಲ್ಲಾಪಿಲ್ಲಿ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಇದನ್ನೂ ಓದಿ-https://suddilive.in/archives/13520