ಸ್ಥಳೀಯ ಸುದ್ದಿಗಳು
ರಾತ್ರಿ ನಡೆಯಲಿದೆ ಮಂತ್ರಾಕ್ಷತೆಯ ಪುರಪ್ರವೇಶ
ಸುದ್ದಿಲೈವ್/ಶಿವಮೊಗ್ಗ
ಹಿಂದೂಗಳ ಕನಸಿನ ಕೂಸಾಗಿರುವ ಅಯೋಧ್ಯ ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಲು ಅಕ್ಷತೆ ಕಾಳು ಇಂದು ಶಿವಮೊಗ್ಗಕ್ಜೆ ಆಗಮಿಸಲಿದೆ.
ರಾತ್ರಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಜನಶತಾಬ್ದಿ ರೈಲಿನಲ್ಲಿ ಅಕ್ಷತೆಕಾಳು ಆಗಮಿಸಲಿದೆ. ಸಾಗರ ಮತ್ತು ಶಿವಮೊಗ್ಗಕ್ಕೆ ವಿಶಗವ ಹಿಂದೂ ಪರಿಷತ್ ಈ ಅಕ್ಷತೆಯನ್ನ ತರಲಿದೆ.ಶಿವಮೊಗ್ಗಕ್ಕೆ ಬರುವ ಅಕ್ಷತೆಯನ್ನ ಶಿವಮೊಗ್ಗ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ ಮತ್ತು ತೀರ್ಥಹಳ್ಳಿ ತಾಲೂಕಿಗೆ ಹಂಚಲಾಗುವುದು
ಸಾಗರದಿಂದ ಸಾಗರ, ಸೊರಬ, ಶಿಕಾರಿಪುರ ಮತ್ತು ಹೊಸನಗರ ತಾಲೂಕಿನಲ್ಲಿ ಹಂಚಲಾಗುತ್ತಿದೆ. ಕಳಶದಲ್ಲಿ ಬೆಕ್ಕಿನ ಕಲ್ಮಠಕ್ಕೆ ಬರುವ ಅಕ್ಷತೆಯನ್ನ ಮೆರವಣಿಗೆಯ ಮೂಲಕ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಲಿದೆ.
ಅಯೋಧ್ಯ ರಾಮ ಮಂದಿರದಿಂದ ಕಳಶದಲ್ಲಿ ಬರಲಿರುವ ಮಂತ್ರಾಕ್ಷತೆಯ ಪುರಪ್ರವೇಶವನ್ನ ಅದ್ಧೂರಿಯಾಗಿ ಸ್ವಾಗತ ನಡೆಯಲಿದೆ.
ಇದನ್ನೂ ಓದಿ-https://suddilive.in/archives/3651