ಸ್ಥಳೀಯ ಸುದ್ದಿಗಳು

ಮೋದಿ ಕಾರ್ಯಕ್ರಮದಲ್ಲಿ ವಸಂತ್ ಕುಮಾರ್ ಬಂಗಾರಪ್ಪ ಪ್ರತ್ಯಕ್ಷ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಮೋದಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ‌ ವಸಂತ್ ಕುಮಾರ್ ಬಂಗಾರಪ್ಪ ದಿಡೀರ್ ಪ್ರತ್ಯಕ್ಷ ಆಗಿದ್ದಾರೆ. ವಿಧಾನ ಸಭೆ ಚುನಾವಣೆಯಲ್ಲಿ ಸೊರಬ ಕ್ಷೇತ್ರದಿಂದ ಸಚಿವ ಮಧು ಬಂಗಾರಪ್ಪನವರ ಎದುರು ಸೋತು ಮರೆಯಾಗಿದ್ದ ಕುಮಾರ್ ಬಿಜೆಪಿಯ ಯಾವ ಕಾರ್ಯಕ್ರಮದಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

ಇಂದು ಮೋದಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಕುಮಾರ್ ಬಂಗಾರಪ್ಪ ಬಿಜೆಪಿಯಲ್ಲಿ ಹೊಸ ಚೇತನ್ಯ ಮೂಡಿಸಿದ್ದಾರೆ. ಕೇವಲ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಗಳನ್ನ ಹರಿಬಿಡುವ ಮೂಲಕ ಆಕ್ಟಿವ್ ಆಗಿದ್ದ ಮಾಜಿ ಸಚಿವರು ಮೋದಿ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿರುವುದು ಕುತೂಹಲವನ್ನೂ ಮೂಡಿಸಿದೆ.

ಮೋದಿ ಕಾರ್ಯಕ್ರಮದಲ್ಲಿ ದಿಡೀರ್ ಅಂತ ವೇದಿಕೆಗೆ ಬರೋದು ಕಷ್ಟ. ಕಾರಣ ಇಂತಿಷ್ಟೇ ಜನ ವೇದಿಕೆ ಮೇಲೆ ಇರಬೇಕು ಎಂಬ ನಿಯಮಾವಳಿಗಳು ಇರುತ್ತವೆ. ಮಾಜಿ ಸಚಿವ ವಸಂತ್ ಕುಮಾರ್ ಬಂಗಾರಪ್ಪನವರ ಈ ದಿಡೀರ್ ಎಂಟ್ರಿ ಅಲ್ಲಿನ ಸೆಕ್ಯೂರಿಟಿಗೂ ಅಚ್ಚರಿ ಮೂಡಿಸಿದೆ.

ಅವರು ಇನ್ನೇನು ವೇದಿಕೆ ಮೇಲೆ‌ ಆಸೀನಾರಾಗಬೇಕು ಎನ್ನುವಷ್ಟರಲ್ಲಿ ಸೆಕ್ಯೂರಿಟಿಯವರು ಬಂದು ಲೆಡ್ಜರ್ ನಲ್ಲಿ ಕೆಲ ಮಾಹಿತಿ ಪಡೆದು ಬರೆದುಕೊಂಡು ಹೋದ ಘಟನೆ ನಡೆದಿದೆ. ಇದರಿಂದ ಪಕ್ಷದವರಿಗೂ, ಅವರ ಅಭಿಮಾನಿಗಳಿಗೂ ಹಾಗೂ ಸೆಕ್ಯೂರಿಟಿ ಅವರಿಗೂ ಕುಮಾರ್ ಬಂಗಾರಪ್ಪ ಅಚ್ಚರಿ ಮೂಡಿಸಿದ್ದಾರೆ. ಇನ್ನೇನು ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಪುಹಗಳಿಗೆ ಕುಮಾರ್ ಬ್ರೇಕ್ ಹಾಕಿದ್ದಾರೆ.

ಇದನ್ನೂ ಓದಿ-https://suddilive.in/archives/10993

Related Articles

Leave a Reply

Your email address will not be published. Required fields are marked *

Back to top button