ಸ್ಥಳೀಯ ಸುದ್ದಿಗಳು

ಮೋದಿ ಕಾರ್ಯಕ್ರಮದಲ್ಲಿ ಖದೀಮರ ಹಾವಳಿ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ನಡೆದ‌ ಮೋದಿ ಕಾರ್ಯಕ್ರಮದಲ್ಲಿ ಕಳ್ಳಕಾಕರ ಹಾವಳಿ ಹೆಚ್ಚಾಗಿದೆ. ಪ್ರತಿ ಬಾರಿ ನಡೆದ ಪ್ರಧಾನಿ ಕಾರ್ಯಕ್ರಮದಲ್ಲಿ ಬಿಗಿ ಬಂದೋ ಬಸ್ತ್ ಇದ್ದರೂ ಕಳ್ಳರ ಹಾವಳಿ ತಪ್ಪಿಸಲು ಸಾಧ್ಯವಾಗಿಲ್ಲ.

ಸಭೆಯಲ್ಲಿ ಭಾಗಿಯಾಗಿರುವ ಶ್ರೀನಿವಾಸ್ ಮತ್ತು ರವಿಕುಮಾರ್ ಅವರ ಪ್ಯಾಂಟ್ ಜೇಬಿಗೆ ಕತ್ತರಿ ಹಾಕಿರುವ ಮೂವರು ಕಳ್ಳರಲ್ಲಿ ಓರ್ವನನ್ನ ಹಿಡಿದ ಸಾರ್ವಜನಿಕರು ಆಟೋದಲ್ಲಿ ಜಯನಗರ ಪೊಲೀಸ್ ಠಾಣೆಗೆ ಕರೆತರಲು ಮುಂದಾಗಿದ್ದಾರೆ. ಇನ್ನಿಬ್ಬರು ಎಸ್ಕೇಪ್ ಆಗಿದ್ದಾರೆ.

ಇನ್ನೇನು ಶಿವಮೂರ್ತಿ ಸರ್ಕಲ್ ಗೆ ಆಟೋ ಬರುತ್ತಿದ್ದಂತೆ ಆಟೋ ಚಾಲಕ ವಾಹನ ದಟ್ಟಣೆಯ ಹಿನ್ನಲೆಯಲ್ಲಿ ನಿಧಾನವಾಗಿ ಚಲಿಸಿದ್ದಾನೆ. ಈ ಗ್ಯಾಪ್ ನಲ್ಲಿ ಕಳ್ಳ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ವೀರ ಶಿವಮೂರ್ತಿ ವೃತ್ತದ ಬಳಿಯ ಆಟೋ ಚಾಲಕರು ಕಳ್ಳನನ್ನ ಮತ್ತೆ ಹಿಡಿದು ಡ್ಯೂಟಿಯಲ್ಲಿದ್ದ ಪೊಲೀಸರ ರಕ್ಷಣೆಯಲ್ಲಿ ಠಾಣೆಗೆ ಕರೆತರಲಾಗಿದೆ.

ಪಿಕ್ ಪ್ಯಾಕೆಟ್ ಮಾಡಲು ಹೋಗಿ ಸಿಕ್ಕಿಬಿದ್ದವನನ್ನ ಶಿಕಾರಿಪುರದ ನಿವಾಸಿ ಜಯಣ್ಣ ಎಂದು ಗುರುತಿಸಲಾಗಿದೆ. ಸಧ್ಯಕ್ಕೆ ಆತನಿಂದ 13 ಸಾವಿರದ 700 ಕ್ಕೂ ಹೆಚ್ಚು ಹಣ ದೊರೆತಿದೆ. ಶ್ರೀನಿವಾಸರವರ ಮೊಬೈಲ್ ಅಪಹರಿಸಲಾಗಿದೆ. ಇನ್ನು ರವಿಕುಮಾರ್ 8000 ರೂ ಹಣ ಕಳೆದುಕೊಂಡಿರುವುದಾಗಿ ಹೇಳುತ್ತಿದ್ದಾರೆ.

ಈ ಕಳ್ಳತನ ಮೋದಿ ಕಾರ್ಯಕ್ರಮದಿಂದ ಹೊರಗೆ ಬರುವಾಗ ನಡೆದಿತ್ತಾ ಅಥವಾ ಹೊರಗಡೆ ನಡೆದಿತ್ತಾ ಎಂಬುದು ತಿಳಿದು ಬರಬೇಕಿದೆ. ಶಿವಮೊಗ್ಗದಾದ್ಯಂತ ಮೋದಿ ಕಾರ್ಯಕ್ರಮಕ್ಕಾಗಿ ಬಿಗಿ ಸೆಕ್ಯೂರಿಟಿ ಹೆಚ್ಚಿತ್ತು. ಕಾರ್ಯಕ್ರಮ ಒಳಗೆ ಹೋಗುವಾಗ ತಪಾಸಣೆ ಪರಿಶೀಲನೆಗಳು ಇತ್ತು. ಈ ವೇಳೆ ಕಳ್ಳ ತನ್ನ ಕೈಚಳಕ ತೋರಿದ್ದಾನೆ. ಒಂದು ವೇಳೆ ಕಾರ್ಯಕ್ರಮದ ಒಳಗೆ ಕಳ್ಳತನ ನಡೆದಿದ್ದರೆ ಕಳುವು ಮಾಡುವ ಕಾರ್ಯವನ್ನೇ ಮೈಗೂಡಿಸಿಕೊಂಡವರಿಗೆ ಈ ಬಿಗಿ ಸೆಕ್ಯೂರಿಟಿಗಳಲ್ಲ ನಗಣ್ಯವಾಗಿದೆ. ಶ್ರೀಸಾಮಾನ್ಯನಿಗೆ ಈ ಸೆಕ್ಯೂರಿಟಿಗಳು ಅನ್ವಯವಾಗಿದೆ.

ಇದನ್ನೂ ಓದಿ-https://suddilive.in/archives/10979

Related Articles

Leave a Reply

Your email address will not be published. Required fields are marked *

Back to top button