ಸ್ಥಳೀಯ ಸುದ್ದಿಗಳು

ಹಬ್ಬದ ಪ್ರಯುಕ್ತ ಶಾಂತಿ ಸಭೆ

ಸುದ್ದಿಲೈವ್/ಸೊರಬ

ಹಿಂದು ಮತ್ತು ಮುಸ್ಲಿಂ ಧರ್ಮಗಳ ಪವಿತ್ರ ಹಬ್ಬಗಳಾದ ರಂಜಾನ್ ಮತ್ತು ಯುಗಾದಿ ಹಬ್ಬಗಳ ಪ್ರಯುಕ್ತ ಹಿಂದು ಮತ್ತು ಮುಸ್ಲಿಂ ಧರ್ಮಗಳ ಮುಖಂಡರ ಸಮಕ್ಷಮದಲ್ಲಿ ಶಾಂತಿ ಸಭೆಯನ್ನು ಸೊರಬ ಆರಕ್ಷಕ ವೃತ್ತ ನಿರೀಕ್ಷಕರಾದ ರಮೇಶ್ ರಾವ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು .

ನಗರದ ಪೋಲಿಸ್ ಠಾಣೆಯಲ್ಲಿ ಆರಕ್ಷಕ ವೃತ್ತ ನಿರೀಕ್ಷಕರಾದ ರಮೇಶ್ ರಾವ್ ಅಧ್ಯಕ್ಷತೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಹಿಂದು ಮತ್ತು ಮುಸ್ಲಿಂ ಧರ್ಮಗಳ ಮುಖಂಡರುಗಳಿಂದ ರಂಜಾನ್ ಹಾಗೂ ಯುಗಾದಿಯ ಆಚರಣೆಯ ಬಗ್ಗೆ ಮಾತನಾಡಿದ ಅವರು ನಗರದಲ್ಲಿ ಆಚರಿಸುವ ಇಸ್ಲಾಂ ಧರ್ಮದ ಪವಿತ್ರವಾದ ಹಬ್ಬವಾದ ರಂಜಾನ್ ಹಾಗೂ ಹಿಂದು ಧರ್ಮದ ಪವಿತ್ರ ಹಬ್ಬವಾದ ಚಾಂದ್ರಮಾನ ಯುಗಾದಿ ಹಬ್ಬದ ಅಂಗವಾಗಿ ತಾವು ತಮ್ಮ ತಮ್ಮ ಧರ್ಮದ ಹಾಗೂ ತಮ್ಮ ತಮ್ಮ ಸಂಪ್ರದಾಯಗಳಂತೆ ರಂಜಾನ್ ಹಬ್ಬ ಮತ್ತು ಯುಗಾದಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಿಕೊಂಡು ತಾವು ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಿ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಯನ್ನು ಕಾಪಾಡುವಂತೆ ಮುಖಂಡರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರ ಠಾಣೆ ಪಿಎಸ್ಐ ನಾಗರಾಜ್ ,ಪುರ ಸಭೆ ಸದಸ್ಯ ಪ್ರಸನ್ನಕುಮಾರ್, ಸಂಜೀವ ಆಚರ್, ಕೆರಿಯಪ್ಪ, ಸುರೇಶ್, ಅಬ್ದುಲ್ ರೆಹ್ಮಾನ್ ಸಾಬ್, ಅತಿಕ್ ರೆಹಮಾನ್, ಮೋನು ಮೇಸ್ತ್ರಿ, ನೂರ್ ಅಹಮದ್,

ಪೋಲಿಸ್ ಮುಖ್ಯ ಪೇದೆಗಳಾದ ನಾಗೇಶ್, ರಾಘವೇಂದ್ರ, ಉಮೇಶ್, ಠಾಣೆ ಸಿಬ್ಬಂದಿ ಮುಂತಾದವರು ಹಾಜರಿದ್ದರು ನಗರದ ಎಲ್ಲಾ ಮಸೀದಿ ಸಮಿತಿಗಳ ಪದಾಧಿಕಾರಿಗಳು ಹಾಗೂ ದೇವಾಲಯಗಳ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಮುಂತಾದವರು ಹಾಜರಿದ್ದರು.

ಇದನ್ನೂ ಓದಿ-https://suddilive.in/archives/12335

Related Articles

Leave a Reply

Your email address will not be published. Required fields are marked *

Back to top button