ಈಶ್ವರಪ್ಪನವರು ಬಿಟ್ಟರೂ ಬಿಡದ ಬಿಜೆಪಿ!
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಹೆಸರು ಪ್ರಕಟವಾದ ನಂತರ ಉಂಟಾಗಿರುವ ಬೆಳವಣಿಗೆ ಬಿಜೆಪಿ ಪಕ್ಷದಲ್ಲಿ ಬಂಢಾಯ ಎಬ್ಬಿಸಿದೆ. ಬಂಡಾಯದ ಶಮನಕ್ಕೆ ಮಣಿಯದ ಈಶ್ವರಪ್ಪ ಸ್ಪರ್ಧೆ ಮಾಡಿಯೇ ತೀರುವುದಾಗಿ ತೊಡೆತಟ್ಟಿದ್ದಾರೆ.
ಹಲವಾರು ಸಂಧಾನದ ಪ್ರಯತ್ನಗಳು ಫಲಿಸುತ್ತಿಲ್ಲ. ಸ್ಪರ್ಧೆ ಖಚಿತ ಎಂದಿರುವ ಈಶ್ವರಪ್ಪ ಬಿಜೆಪಿಯಲ್ಲಿ ಸಂಚಲನ ಮೂಡಿಸಿದ್ದಾರೆ. ಪಕ್ಷ ಕೆಲವರ ಕೈಯಲ್ಲಿರುವುದಾಗಿಯೂ ಅದನ್ನ ಶುದ್ಧೀಕರಣ ಮಾಡುವುದೇ ಸ್ಲರ್ಧೆಯ ಹಿಂದಿನ ಉದ್ದೇಶವೆಂದು ಹೇಳಿರುವುದು ಬಿಜೆಪಿ ಪಕ್ಷದಲ್ಲಿ ಸಂಚಲನ ಮೂಡಿಸಿದೆ.
ಶಿವಮೊಗ್ಗವನ್ನೇ ಈಶ್ವರಪ್ಪ ತಮ್ಮ ಅಖಾಡವನ್ನಾಗಿ ಆಯ್ಕೆ ಮಾಡಿಕೊಂಡಿರುವುದು ಬಿಎಸ್ ವೈ ಕುಟುಂಬಕ್ಕೆ ಕೊಂಚ ತಲೆಬಿಸಿ ತಂದಿದೆ. ಈಶ್ವರಪ್ಪನವರ ಸ್ಪರ್ಧೆಯಿಂದಾಗಿ ಬಿಜೆಪಿಯಲ್ಲಿ ಸಂಚಲನ ಉಂಟಾದರೆ ಕಾಂಗ್ರೆಸ್ ಸಹ ಸಣ್ಣ ನಗೆ ಬೀರಿದೆ. ನಿನ್ನೆ ಸಂಜೆಯೊಳಗೆ ಈಶ್ವರಪ್ಪ ಮೋದಿ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಳ್ಳುತ್ತಾರೆ ಎಂಬ ಲೆಕ್ಕಾಚಾರ ಬಿಜೆಪಿದು ಬುಡಮೇಲಾಗಿದೆ.
ಪಕ್ಷದಲ್ಲಿ ಮೋದಿ ಕಾರ್ಯಕ್ರಮದ ಬ್ಯಾನರ್ ನಲ್ಲಿ ಈಶ್ವರಪ್ಪನವರ ಫೋಟೋ ರಾರಾಜಿಸುತ್ತಿದೆ. ಈಗಾಗಲೇ ಮಾಧ್ಯಮಗಳಿಗೆ ಈಶ್ವರಪ್ಪನವರು ಮೋದಿ ಕಾರ್ಯಕ್ರಮಕ್ಕೆ ಬರೊಲ್ಲ ಎಂದು ಹೇಳಿದ್ದಾರೆ. ಆದರೆ ಪಕ್ಷದಿಂದ ಅವರ ಮನವೊಲಿಸುವ ಪ್ರಯತ್ನ ನಿರಂತರವಾಗಿ ನಡೆದಿದೆ. ಈಶ್ವರಪ್ಪನವರ ಅಗತ್ಯತೆ ಪಕ್ಷಕ್ಕಿದೆ. ಬಿಜೆಪಿ ಉಳಿಸಿಕೊಳ್ಳುತ್ತಾ ಅಥವಾ ಸಿಡಿದೆದ್ದ ಈಶ್ವರಪ್ಪನವರೆ ಪಕ್ಷ ತೊರೆದು ಬರ್ತಾರ ಕಾದುನೋಡಬೇಕಿದೆ.
ಇದನ್ನೂ ಓದಿ-https://suddilive.in/archives/10974