ಅಪಾಯಕಾರಿಯಾಗಿ ಗ್ಯಾಸ್ ಫಿಲ್ಲಿಂಗ್-ಓರ್ವನ ವಿರುದ್ಧ ಎಫ್ಐಆರ್
ಸುದ್ದಿಲೈವ್/ಶಿವಮೊಗ್ಗ
ಗೃಹಬಳಕೆ ಸಿಲಿಂಡರ್ ಬಳಸಿ ಅಪಾಯಕಾರಿಯಾಗಿ ರೀಫಿಲ್ಲಿಂಗ್ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಆಹಾರ ನಿರೀಕ್ಷಕ ರಾಜ್ಯಪ್ಪ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಾ. 05 ರಂದು ಮದ್ಯಾಹ್ನ 1-30 ರ ಸಮಯದಲ್ಲಿ ಆಹಾರ ಇಲಾಖೆಯ ನಿರೀಕ್ಷಕ ರಾಜಪ್ಪನವರಿಗೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹಿಂಭಾಗದ ಬುದ್ಧನಗರದ 02ನೇ ತಿರುವಿನಲ್ಲಿ ವ್ಯಕ್ತಿಯೋರ್ವ ಒಂದು ಶೆಡ್ ನಲ್ಲಿ ಸಾರ್ವಜನಿಕ ಗೃಹಬಳಕೆಯ ಗ್ಯಾಸ್ ಸಿಲೆಂಡರ್ ಗಳನ್ನು ಉಪಯೋಗಿಸಿ ಅಪಾಯಕಾರಿಯಾದ ರೀತಿಯಲ್ಲಿ ರೀಫಿಲಿಂಗ್ ಮಾಡುತ್ತಿರುತ್ತಾನೆಂದು ಮಾಹಿತಿ ಬಂದಿರುತ್ತದೆ.
ಸ್ಥಳಕ್ಕೆ ಹೋಗಿ ನೋಡಿದಾಗ ಬುದ್ಧನಗರ 02ನೇ ತಿರುವಿನ ಒಂದು ಶೆಡ್ ನಲ್ಲಿ ಗ್ರಹಬಳಕೆಯ ಗ್ಯಾಸ್ ಸಿಲೆಂಡರ್ ಗಳನ್ನು ಉಪಯೋಗಿಸಿ ಅಪಾಯಕಾರಿಯಾದ ರೀತಿಯಲ್ಲಿ ವ್ಯಕ್ತಿಯೋರ್ವ ರೀಫಿಲಿಂಗ್ ಮಾಡುತ್ತಿರುವುದು ಕಂಡು ಬಂದಿರುತ್ತೆ.
ರೀಫಿಲ್ಲಿಂಗ್ ಮಾಡುತ್ತಿರುವ ವ್ಯಕ್ತಿಯನ್ನ ಇಮ್ರಾನ್ ಖಾನ್ ಎಂದು ಪತ್ತೆಹಚ್ಚಲಾಗಿದ್ದು, ನಂತರ ರಾಜಪ್ಪನವರು ಕೂಡಲೇ ಮದ್ಯಾಹ್ನ 2-30 ಗಂಟೆಯ ಸಮಯದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಗೆ ಹಾಜರಾಗಿ ಸಾರ್ವಜನಿಕ ಗೃಹಬಳಕೆಯ ಸಿಲೆಂಡರ್ ಗಳನ್ನು ಉಪಯೋಗಿಸಿ ಆಪಾಯಕಾರಿಯಾದ ರೀತಿಯಲ್ಲಿ ರೀಫಿಲಿಂಗ್ ಮಾಡುತ್ತಿರುವ ಇಮ್ರಾನ್ ಖಾನ್ ವಿರುದ್ಧ ಮುಂದಿನ ಕಾನೂನು ಕ್ರಮ ಜರುಗಿಸಲು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ-https://suddilive.in/archives/10201