ಕ್ರೈಂ ನ್ಯೂಸ್
ಕಾಣೆಯಾಗಿದ್ದ ರೈತ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
ಸುದ್ದಿಲೈವ್/ಶಿವಮೊಗ
ತಾಲೂಕಿನ ಗೋಂಧಿ ಚಟ್ನಹಳ್ಳಿಯಲ್ಲಿ ಹರಿಯುವ ತುಂಗ ನದಿಯ ದಡದ ಮರವೊಂದಕ್ಕೆ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಸಾಲ ಮತ್ತು ಮನೆಯ ಜವಬ್ದಾರಿ ಹೆಚ್ಚಾದುದರಿಂದ ರೈತ ಮಹೇಶ್ (43) ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮೂರು ಎಕರೆ ಜಮೀನು ಹೊಂದಿರುವ ಮಹೇಶ್ ಅವರಿಗೆ ಮದುವೆಯಾಗಿ 9 ವರ್ಷ ಕಳೆದಿದೆ.
ಒಂದು ಕಡೆ ಮದುವೆಯಾಗಿ 9 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಇತ್ತೀಚೆಗೆ ತಂದೆ ತಾಯಿ ಸಹ ಹಸಿಗೆ ಹಿಡಿದ ಇದ್ದರಿಂದ ಮಹೇಶ್ ಮೇಲೆ ಎಲ್ಲಾ ಜವಬ್ದಾರಿ ಹೊತ್ತಿದ್ದರು. ಇತ್ತೇಚೆಗೆ ಮಾಡಿರುವ ಸಾಲದ ಬಡ್ಡಿಯೂ ಹೆಚ್ಚಾಗಿದ್ದರಿಂದ ಮಹೇಶ್ ಆತ್ಮಹತ್ಯೆ ಮಾಡಿಕೊಂಡೊರುವುದಾಗಿ ಹೇಳಲಾಗಿತ್ತಿದೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಹೇಶ್ ಮನೆ ಬಿಟ್ಟು ಎರಡು ದಿನವಾದ ಮೇಲೆ ಇಂದು ನೇಣಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಇದನ್ನೂ ಓದಿ-https://suddilive.in/archives/8707