ಭಾರತ್ ಅಕ್ಕಿಗೆ ಉಜ್ಜಯಿನಿ ಶ್ರೀಗಳಿಂದ ಚಾಲನೆ
ಸುದ್ದಿಲೈವ್/ಶಿವಮೊಗ್ಗ
ಭಾರತ್ ಅಕ್ಕಿ ಯೋಜನೆಗೆ ಉಜ್ಜಯಿನಿ ಮಠದ ಸ್ವಾಮಿಗಳಾದ ಸಿದ್ದಲಿಂಗ ಶ್ರೀಗಳು ಅಕ್ಕಿ ವಿತರಿಸುವ ಮೂಲಕ ಚಾಲನೆ ನೀಡಲಾಯಿತು. ಪ್ರಥಮ ಬ್ಯಾಗ್ ನ್ನ ಮಹಿಳೆಯರಿಗೆ ಹಂಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಿವಮೊಗ್ಗ, ಶಿಕಾರಿಪುರ ಮತ್ತು ಬೈಂದೂರಿನಲ್ಲಿ ಏಕಕಾಲದಲ್ಲಿ ಅಕ್ಕಿ ವಿತರಿಸಲಾಯಿತು. 290 ರೂ.ಗೆ 10 ಕೆಜಿ ಅಕ್ಕಿ ನೀಡಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿದ ಸಂಸದ ರಾಘವೇಂದ್ರ ಉಚಿತವಾಗಿ ಯಾವುದೇ ನೀಡುವುದು ಪ್ರಧಾನಿಗಳ ಉದ್ದೇಶವಿಲ್ಲ.
ಬದಲಾಗಿ ಕಡಿಮೆ ದರಕ್ಕೆ ಅಕ್ಕಿ ವಿತರಿಸಲು ಮುಂದಾಗಿದ್ದಾರೆ. ಹಾಗಾಗಿ 290 ರೂ ನೀಡಿದರೆ 10 ಕೆಜಿ ಅಕ್ಕಿ ಬ್ಯಾಗ್ ನೀಡಲಾಗುತ್ತಿದೆ. ಒಬ್ಬರಿಗೆ 10 ಕೆಜಿ ಅಕ್ಕಿ ನೀಡಲಾಗುತ್ತಿದೆ. ಗರೀಬಿ ಹಟಾವೋ ಎಂಬ ಅಭಿಯಾನ ನಡೆಯಿತು. ಆದರೆ ಗರೀಬಿ ಹೋಗಲಾಡಿಸುವುದಕ್ಕೆ ಸೂಕ್ತ ಯೋಜನೆ ತರಲೇ ಇಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಗೂ ಟಾಂಗ್ ನೋಡಿದರು.
ಕಾರ್ಯಕ್ರಮದ ಅಂಗವಾಗಿ ಮಹಿಳೆಯೋರ್ವರಿಗೆ ಅಕ್ಕಿ ಬ್ಯಾಗ್ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಂದಿನ ದಿನಗಳಲ್ಲಿ ಪ್ರತಿದಿನ 10 ಲಾರಿ ಲೋಡು ಅಕ್ಕಿಯನ್ನಬಡಾವಣೆಗೆ ಹೋಗಿ ಹಂಚಲಾಗುತ್ತಿದೆ. ನಂತರ ನ ದ ದಿನಗಳಲ್ಲಿ ಮಾಲ್ ಗಳಲ್ಲಿ ಮಾರಾಟ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ-https://suddilive.in/archives/10152