ರಾಜ್ಯ ಸುದ್ದಿಗಳು

ನಾಳೆ 290 ರೂ.ಗೆ10 ಕೆಜಿ ಅಕ್ಕಿ ವಿತರಣೆಗೆ ಚಾಲನೆ

ಸುದ್ದಿಲೈವ್/ಶಿವಮೊಗ್ಗ

ನಾಳೆಯಿಂದ ಶಿವಮೊಗ್ಗದ ವಿನೋಬ ನಗರದ ಶಿವಾಲಯದಲ್ಲಿ ಭಾರತ್ ಅಕ್ಕಿಯನ್ನು ಸಂಸದ ರಾಘವೇಂದ್ರ ಚಾಲನೆ ನೀಡಲಿದ್ದಾರೆ. ಪ್ರತಿ ಕೆಜಿಗೆ  29.00 ರೂ.ನಂತೆ ವಿತರಣೆ ಮಾಡಲಿದ್ದಾರೆ.

ದೇಶದ ಪ್ರಜೆಯು ಹಸಿವಿನಿಂದ ಬಳಲಬಾರದೆಂಬ ಕಲ್ಪನೆಯ ಹಿನ್ನಲೆಯಲ್ಲಿ  ಪ್ರಧಾನ ಮಂತ್ರಿಗಳ ದೃಡ ಸಂಕಲ್ಪದಿಂದ ಪ್ರಾರಂಭಿಸಲಾದ ಭಾರತ್ ಅಕ್ಕಿ ವಿತರಣಾ ಯೋಜನೆಗೆ ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪಿಯುಷ್ ಗೋಯಲ್ ಕಳೆದ ಫೆ.06 ರಂದು  ದೆಹಲಿಯಲ್ಲಿ 100 ಆಹಾರ ವ್ಯಾನ್ ಗಳಿಗೆ ಚಾಲನೆ ನೀಡುವುದರ ಮೂಲಕ ಅಕ್ಕಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.‌

ಪ್ರತಿಯೊಬ್ಬ ಪ್ರಜೆಗೂ ಅಕ್ಕಿ ದೊರಕಬೇಕೆಂಬ ದೃಷ್ಟಿಯಿಂದ ಅನುಷ್ಟಾನಗೊಳಿಸುತ್ತಿರುವ ಈ ಯೋಜನೆಯನ್ನ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿಯೂ ಸಹ ವಿತರಿಸಲಾಗುತ್ತಿದೆ.  10ಕೆ.ಜಿ. ಬ್ಯಾಗ್ ರೂ.290.00 ಮೊತ್ತದಲ್ಲಿ ಭಾರತ್ ಅಕ್ಕಿ ವಿತರಣಾ ಕಾರ್ಯಕ್ರಮಕ್ಕೆ ಸಂಸದ ರಾಘವೇಂದ್ರ ಚಾಲನೆ ನೀಡಲಿದ್ದಾರೆ. ಸಾರ್ವಜನಿಕರು ಭಾರತ್ ಅಕ್ಕಿ ಯೋಜನೆಯನ್ನ ಸದುಪಯೋಗ ಪಡಿಸಿಕೊಳ್ಳಲು  ವಿನಂತಿಸಲಾಗಿದೆ.

ನಾಳೆಯಿಂದ ಪ್ರಾರಂಭವಾಗುವ ಈ ಕಾರ್ಯಕ್ರಮವು ಮುಂದಿನ ದಿನಗಳಲ್ಲಿ ನಿರಂತರವಾಗಿ ಎಲ್ಲಾ ತಾಲ್ಲೂಕುಗಳಲ್ಲಿಯೂ ವಿತರಿಸಲಾಗುತ್ತದೆ. ನಾಳೆಯೇ ಶಿಕಾರಿಪುರ ವಿಧಾನ ಸಭಾ ಕ್ಷೇತ್ರದಲ್ಲಿ ಶಿಕಾರಿಪುರದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಬೆಳಿಗ್ಗೆ 9.30 ಕ್ಕೆ ಹಾಗೂ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಉಪ್ಪುಂದ ಸಂತೆ ಮಾರ್ಕೆಟ್ ನಲ್ಲಿ ಬೆಳಿಗ್ಗೆ 9.00 ಗಂಟೆಗೆ ಭಾರತ್ ಅಕ್ಕಿ ವಿತರಣಾ ಕಾರ್ಯಕ್ರಮ ಪ್ರಾರಂಭವಾಗುತ್ತಿದೆ.

ಇದನ್ನೂ ಓದಿ-https://suddilive.in/archives/10122

Related Articles

Leave a Reply

Your email address will not be published. Required fields are marked *

Back to top button