ಸ್ಥಳೀಯ ಸುದ್ದಿಗಳು

ಮೂರು ಜಿಲ್ಲೆಯಲ್ಲಿ ಇಂದು ಕೆಎಫ್ ಡಿಗೆ ಎರಡು ಬಲಿ

ಸುದ್ದಿಲೈವ್/ಶಿವಮೊಗ್ಗ/ಶಿರಸಿ/ಚಿಕ್ಕಮಗಳೂರು

ಬಿಸಿಲು ಹೆಚ್ಚಾಗುತ್ತಿದ್ದಂತೆ ಮಂಗನ ಕಾಯಿಲೆಯ ತೀವ್ರತೆ ಹೆಚ್ಚಾಗುತ್ತಿದೆ. ಶಿವಮೊಗ್ಗ, ಶಿರಸಿ ಚಿಕ್ಕಮಗಳೂರು ಸೇರಿ ಮೂರು ಜಿಲ್ಲೆಯಲ್ಲಿ‌ ಎರಡು ಸಾವಾಗಿದೆ.‌ಶಿವಮೊಗ್ಗ ಜಿಲ್ಲೆಯಲ್ಲಿ ಕೆಎಫ್ ಡಿ‌ ಹೆಲ್ತ್ ಬುಲಿಟಿನ್ ಮಾತ್ರ ಕಾಣೆಯಾಗಿದೆ.

ಕೆಎಫ್ ಡಿಗೆ ಇಂದು ಮೂರು ಜಿಲ್ಲೆಯಲ್ಲಿ 43 ಜನರನ್ನ ಕೆಎಫ್ ಡಿ ಪರೀಕ್ಷೆಗೆ ಒಳಪಡಸಲಾಗಿದೆ ಎರಡು ಪಾಸಿಟಿವ್ ಪತ್ತೆಯಾಗಿದ್ದು, ಎರಡು ಸಾವು ಕಂಡುಬಂದಿದೆ. ಚಿಕ್ಕಮಗಳೂರು ಮತ್ತು ಶಿರಸಿ ಜಿಲ್ಲೆಯಲ್ಲಿ ಎರಡು ಪಾಸಿಟಿವ್ ಕಂಡು ಬಂದಿದ್ದು, ಎರಡು ಸಾವು ಕಂಡು ಬಂದಿದೆ.

ಶಿವಮೊಗ್ಗದಲ್ಲಿ ಮಾತ್ರಯಾವುದೇ ಉಲ್ಬಣವಾಗಿಲ್ಲ. ಆದರೆ ಹೆಲ್ತ್ ಬುಲಿಟಿನ್ ಮಾತ್ರ ದಿನಾಲು ಬರುತ್ತಿದ್ದು ಕಳೆದ ಒಂದು ವಾರದಿಂದ ನಾಪತ್ತೆಯಾಗಿದೆ. ಇಲ್ಲಿಯ ತಪಾಸಣೆಯ ಬಗ್ಗೆಯೂ ಅನುಮಾನ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಈ ಕಾಯಿಲೆ ಮತ್ತಷ್ಟು ಉಲ್ಬಣವಾಗುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆ ಎಷ್ಟರ ಮಟ್ಟಿಗೆ ಸಿದ್ಧತೆಗೊಂಡಿದೆ ಕಾದು ನೋಡಬೇಕಿದೆ.

ಮೂರು ಜಿಲ್ಲೆಯಿಂದ ಇದುವರೆಗೂ ಕೆಎಫ್ ಡಿ ಸಾವು ಇದುವರೆಗೂ 8 ಕ್ಕೆ ಏರಿಕೆಯಾಗಿದೆ. ಶಿವಮೊಗ್ಗ 1, ಚಿಕ್ಕಮಗಳೂರಿನಲ್ಲಿ 3, ಶಿರಸಿಯಲ್ಲಿ 4 ಸಾವಾಗಿದೆ.

ಇದನ್ನೂ ಓದಿ-https://suddilive.in/archives/10048

Related Articles

Leave a Reply

Your email address will not be published. Required fields are marked *

Back to top button