ಕ್ರೈಂ ನ್ಯೂಸ್

ಭಾರಿ ಗಾಳಿ ಮಳೆಗೆ ಓರ್ವ ವ್ಯಕ್ತಿ ಬಲಿ-ಆಗುಂಬೆಯಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರ

ಸುದ್ದಿಲೈವ್/ತೀರ್ಥಹಳ್ಳಿ

ಶಿವಮೊಗ್ಗ ಮತ್ತು ಭದ್ರಾವತಿ ಹೊರತು ಪಡಿಸಿ ಎಲ್ಲಾ ತಾಲೂಕಿನಲ್ಲಿ ಮಳೆ ಅಬ್ಬರ ಉಂಟಾಗಿದೆ. ಗಾಳಿ ಮಳೆಗೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಹೋಬಳಿಯಲ್ಲಿ ವ್ಯಕ್ತಿ ಬಲಿಯಾಗಿದ್ದಾರೆ.

ತೀರ್ಥಹಳ್ಳಿಯಲ್ಲಿ ಸತತ ಒಂದು ಗಂಟೆ ಮಳೆ ಸುರಿಸಿದೆ. ಸಾಗರ, ಸೊರಬ ಹೊಸನಗರದಲ್ಲಿ ಮಳೆಯಾಗಿದೆ. ಭದ್ರಾವತಿ ಮತ್ತು ಶಿವಮೊಗ್ಗದಲ್ಲಿ ಭರ್ಜರಿ ಗಾಳಿ ಹಾಗೂ ತುಂತುರು ಮಳೆಯಾಗಿದೆ.

ಆದರೆ ಕೋಣಂದೂರಿನಿಂದ ಸಂಪಗಾರಿಗೆ ಹೊರಟಿದ್ದ ಜಯಂತ್ ಭಟ್ ಅವರ ಮೇಲೆ ಮರ ಉರುಳಿ ಸಾವಾಗಿದೆ. ಕೃಷಿಕರಾಗಿರುವ ಭಟ್ ಕೋಣಂದೂರಿನಿಂದ ಮನೆಗೆ ಹೋಗುವಾಗ ದಾರಿ ಮಧ್ಯೆ ಎರಡು ಮೂರು ಮರಗಳು ಒಂದರ ಮೇಲೊಂದು ಉರುಳಿ ಬಿದ್ದು ಒಂದು ಮರ ಇವರ ಮೇಲೆ ಬಿದ್ದಿದೆ.

ಜಯಂತ್ ಅವರ ಮೃತ ದೇಹವನ್ನ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆಗುಂಬೆಯಲ್ಲೂ ಭಾರಿ ಮಳೆ ಬಿದ್ದಿದೆ. ಭಾರಿ ಮಳೆಗೆ ಮರವೊಂದರ ಬುಡ ಮೇಲಾಗಿದೆ. ರಸ್ತೆಗೆ ಅಡ್ಡಲಾಗಿ ಬಿದ್ದ ಮರದಿಂದ ಟ್ರಾಫಿಕ್ ಜ್ಯಾಮ್ ಆಗಿದೆ. ಆಗುಂಬೆಯ ಮೂರನೇ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ. ಪೊಲೀಸರು ಮತ್ತು ಅರಣ್ಯ ಇಲಾಖೆಯವರು ಸ್ಥಳಕ್ಕೆ ದಾವಿಸಿ ಮರ ತೆರವುಗೊಳಿಸಿದ್ದಾರೆ.

ಇದನ್ನೂ ಓದಿ-https://suddilive.in/archives/13132

Related Articles

Leave a Reply

Your email address will not be published. Required fields are marked *

Back to top button