Ksrtc ಬಸ್ ನಿಲ್ದಾಣದಲ್ಲಿ ಮುಂದುವರೆದ ಕಳುವು ಪ್ರಕರಣ
ಸುದ್ದಿಲೈವ್/ಶಿವಮೊಗ್ಗ
ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮಗದೊಂದು ಕಳುವು ಪ್ರಕರಣ ದಾಖಲಾಗಿದೆ. ಇದರಿಂದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ವರ್ಷದ ಮೂರನೇ ಪ್ರಕರಣ ದಾಖಲಾಗಿದೆ.
ಸ್ನೇಹಿತರ ಮಗನ ಮದುವೆಗೆ ಚಿಕ್ಕಮಗಳೂರಿನಿಂದ ಬಂದ ವೈಲೆಟ್ ವಿಲ್ಮಾ ಗೋಂನ್ಸಾಲ್ವೆಸ್ ಎಂಬುವರು ಶಿವಮೊಗ್ಗದ ಲಗಾನ್ ಕಲ್ಯಾಣ ಮಂದಿರಕ್ಕೆ ಬಂದು ಕಾರ್ಯಕ್ರಮ ಮುಗಿಸಿಕೊಂಡು ಊರಿಗೆ ಹೋಗಲು ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ.
ಟಿಕೆಟ್ ಪಡೆಯಲು ಮಹಿಳೆ ಪರ್ಸ್ ನಲ್ಲಿದ್ದ ಆಧಾರ್ ಕಾರ್ಡ್ ತೆಗೆಯಲು ಮುಂದಾದಾಗ ಪರ್ಸ್ ನ ಜಿಪ್ ತೆಗೆದಿತ್ತು. ಪರಿಶೀಲಿಸಿದಾಗ 96 ಗ್ರಾಂ ಮೌಲ್ಯದ 4,85,000/- ಚಿನ್ನಾಭರಣ ಕಳುವಾಗಿದೆ.
ಈ ಬಗ್ಗೆ ಗೋಂನ್ಸಾಲ್ವೆಸ್ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಫ್ಲಾಟ್ ಫಾರಂ ಗೆ ಬಸ್ ಬಂದಾಗ ರಶ್ ಆಗಿತ್ತು ಎಂಬುದನ್ನ ಗೋಂನ್ಸಾಲ್ವೆಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ಸಿಸಿ ಟಿವಿ ವರ್ಕ್ ಮಾಡುತ್ತಿದೆ. ಕಣ್ಗಾವಲಿದ್ದರೂ ಬಸ್ ನಿಲ್ದಾಣದಲ್ಲಿ ಕಳ್ಳರ ಕೈಚಳಕ ಮುಂದು ವರೆದಿದೆ. ಯಾವಾಗ ಬ್ರೇಕ್ ಬೀಳಲಿದೆ ಕಾದು ನೋಡಬೇಕಿದೆ.
ಇದನ್ನೂ ಓದಿ-https://suddilive.in/archives/8668