ಕ್ರೈಂ ನ್ಯೂಸ್

ಲೋಕಾಯುಕ್ತರು ಎಂದು ಹೇಳಿ ಲಕ್ಷ ರೂ. ವಂಚನೆ

ಸುದ್ದಿಲೈವ್/ಶಿವಮೊಗ್ಗ

ಒಂದು ಒಳ್ಳೆಯ ಉದ್ದೇಶ ಇಟ್ಟುಕೊಂಡು ಲೋಕಾಯುಕ್ತವನ್ನ ಅಸ್ಥಿತ್ವಕ್ಕೆ ತರಲಾಗಿದೆ. ಆದರೆ ಅದರ ಹೆಸರಲ್ಲೇ ವಂಚನೆ ನಡೆಸಲಾಗಿದೆ. ಒಂದು ಅಂತು ಸತ್ಯ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹೆದರುವುದು ಮಾತ್ರ ಲೋಕಾಯುಕ್ತಕ್ಕೆ ಎಂಬುದು ಮಾತ್ರ ಈ ಎಫ್ಐಆರ್ ನಿಂದ ಗೊತ್ತಾಗಿದೆ.  ಲೋಕಾಯುಕ್ತರು ಎಂದು ಹೇಳಿ ಸಾಗರದ ಆಹಾರ ಶಿರಸ್ತೇದಾರರಿಂದ‌ 1 ಲಕ್ಷ ರೂ ವಂಚಿಸಿರುವ‌ ಘಟನೆ ಶಿವಮೊಗ್ಗದ ಜಯನಗರ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಾಗಿದೆ.

ಫೆ.08 ರಂದು ಬೆಳಿಗ್ಗೆ 9-30ಗಂಟೆಗೆ ಸರ್ಕಾರದ ಗ್ಯಾರೆಂಟಿ ಯೋಜನೆಯ ಫಲಾನುಭವಿಗಳ ಸಮಾವೇಶದ ಆಹ್ವಾನ ಪತ್ರಿಕೆಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನೀಡಲು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿಗೆ ಬಂದಿದ್ದ ಆಹಾರ ಶಿರಸ್ತೇದಾರರು, ಜಿಲ್ಲಾಧಿಕಾರಿಗಳ ಕಛೇರಿಯ ಮುಂದಿನ ಹಾಲ್ ನ ಛೇರ್ ನ ಮೇಲೆ ಕುಳಿತಿರುವಾಗ ಮೊಬೈಲ್ ಗೆ ವಾಟ್ಸಪ್ ಕರೆ ಬಂದಿತ್ತು.

ಅನಾಮಧೇಯ ವಾಟ್ಸ ಆಫ್ ಕಾಲ್ ರಿಸೀವ್ ಮಾಡಿದ ಶಿರಸ್ತೇದಾರಿಗೆ ಕರೆ ಮಾಡಿದ ವ್ಯಕ್ತಿ ನಾನು ಲೋಕಾಯುಕ್ತ ಕಛೇರಿಯಿಂದ ಮಾತನಾಡುತ್ತಿರುವುದು ನಿಮ್ಮ ಮೇಲೆ ಒಂದು ಕಂಪ್ಲೆಂಟ್ ಬಂದಿದ್ದು, ತಕ್ಷಣ ನಿಮ್ಮ ಮೇಲೆ ಎಫ್ ಐ ಆರ್ ದಾಖಲಾಗುತ್ತದೆ, ಈ ಬಗ್ಗೆ ನಮ್ಮ ಸಾಹೇಬರು ಮಾತನಾಡುತ್ತಾರೆ. ಎಂದು ಹೇಳಿ ಬೇರೆ ಯಾರೋ ವ್ಯಕ್ತಿಗೆ ಮೊಬೈಲ್ ಕೊಟ್ಟಿರುತ್ತಾನೆ.

ಮೊಬೈಲ್ ನಲ್ಲಿ ಮಾತನಾಡಿದ ಆ ವ್ಯಕ್ತಿಯೂ ಸಹ ಲೋಕಾಯುಕ್ತ ಕಚೇರಿ, ನಾನು ಅಧಿಕಾರಿ ಎಂದು ಮಾತನಾಡಿ, ಮಧ್ಯಾಹ್ನ 12-40 ಗಂಟೆಗೆ ಅಧಿಕಾರಿಗಳ ಸಭೆ ಇದೆ ಆ ಸಭೆಗೆ ನಿಮ್ಮ ಫೈಲ್ ತೆಗೆದುಕೊಂಡು ಹೋಗುತ್ತೇವೆ. ನಿಮ್ಮ ಮೇಲೆ ಎಫ್ ಐ ಆರ್ ದಾಖಲಾಗುತ್ತೆದೆ ಎಂದು ಹೇಳಿ ಹೆದರಿಸಿದ್ದಾನೆ.‌

ಈ ವಿಚಾರವಾಗಿ ಒಂದುವರೆ ನಮಗೆ ಕೊಟ್ಟಲ್ಲಿ ನಿಮ್ಮ ದೂರಿನ ಫೈಲ್ ಗೆ ಬಿ ರಿಪೋರ್ಟ ಮಾಡುತ್ತೇವೆ. ಅಂತ ಹೇಳಿದ್ದಾರೆ. ಮಹಿಳಾ‌ ಶಿರಸ್ತೇದಾರರು ಯಾವ ಕಂಪ್ಲೇಂಟ್ ಬಂದಿದೆ ಮತ್ತು ಒಂದುವರೆ ಅಂದರೆ ಏನು ಸರ್ ಅಂತ ಕೇಳಿದ್ದಕ್ಕೆ, ಒಂದುವರೆ ಲಕ್ಷ ಅಮೌಂಟ್ ಕೊಟ್ಟರೆ ಬಿ ರಿಪೋರ್ಟ್ ಅಂತ ಹೇಳಲಾಗಿದೆ.

ಯಾವಾಗ ಯಾವ ಕಂಪ್ಲೆಂಟ್ ವಿಚಾರ ಬಂದಿದೆ ಎಂದು ಕೇಳಿದಾಗ ಅದನ್ನ ಹೇಳಲಿಕ್ಕೆ ಆಗಲ್ಯ, ಟೈಮ್ ಆಗಿದೆ, ಅಂತ ಹೇಳಿದ ನಕಲಿ ಲೋಕಾಯುಕ್ತ ಅಧಿಕಾರಿ ಮಿಕ್ಕ ವಿಷಯ ಏನಿದೆ ಅದನ್ನು ಮೊದಲು ನಿಮ್ಮೊಂದಿಗೆ ಮಾತನಾಡಿದವರಿಗೆ ಫೋನ್ ಕೋಡುವುದಾಗಿ ಹೇಳಿ ಕೊಟ್ಟಿದ್ದಾನೆ. ಮೊದಲು ಮಾತನಾಡಿದ ವ್ಯಕ್ತಿ ನೋಡಿ ಮೇಡಂ ಅದನೆಲ್ಲಾ ಮಾತನಾಡಲು ಸಮಯವಿಲ್ಲ, ಬಿಜಿ ಇರುವುದಾಗಿ ಹೇಳಿದನು. ಇನ್ನು 05 ನಿಮಿಷಕ್ಕೆ ಹಣ ಬಂದರೆ ನಿಮ್ಮ ಫೈಲ್ ಬಿ ರಿಪೋರ್ಟಿ ಮಾಡುವುದಾಗಿ ಹೇಳಿರುತ್ತಾರೆ.‌

ಶಿರಸ್ತೇದಾರರು ನನ್ನ ಬಳಿ ಹಣವಿಲ್ಲ ಎಂದು ಹೇಳಿದ್ದಕ್ಕೆ ಬೇರೆಯವರೊಂದಿಗೆ ಪಡೆದು ಹಣ ಹಾಕುವಂತೆ ಹೇಳಿರುತ್ತಾರೆ. ನಂತರ ಅವನು ಒಂದು ಆಕೌಂಟ್ ನಂಬರ್ ವಾಟ್ಸ ಆಫ್ ನಲ್ಲಿ ಕಳುಹಿಸಿದ್ದಕ್ಕೆ, ನನಗೆ ಇದರಿಂದ ಹಣ ಹಾಕಲು ಬರಲ್ಲ ಅಂತ ಹೇಳಿರುತ್ತಾರೆ. ತಕ್ಷಣ ಆ ಅಕೌಂಟ್ ನಂಬರ್ ಡಿಲೀಟ್ ಮಾಡಲಾಗಿರುತ್ತದೆ. ನಂತರ ಮತ್ತೆ ಮಹಿಳೆ‌ ಅಧಿಕಾರಿಗೆ ವಾಟ್ಸ್ ಆಫ್ ಗೆ ಪೋನ್ ಪೇ ನಂಬರ್ ಕಳುಹಿಸಿ ಧನಂಜಯ್ ಎಂಬ ಹೆಸರು ಮೆಸೇಜ್ ಮಾಡಲಾಗಿದೆ.

ನಂತರ ಮಹಿಳಾ ಅಧಿಕಾರಿ ಅನಾಮಧೇಯ ವ್ಯಕ್ತಿಯ ಫೋನ್ ಪೇ ನಂಬರ್ ಗೆ ಒಟ್ಟು 1 ಲಕ್ಷ ರೂಗಳನ್ನು ವರ್ಗಾವಣೆ ಮಾಡಿರುತ್ತಾರೆ. ಹಣ ಕಳೆದುಕೊಂಡ ನಂತರ ಮಹಿಳೆಯ ಗಮನಕ್ಕೆ ನಕಲಿ ಲೋಕಾಯುಕ್ತರು ಎಂದು ತಿಳಿದು ಬಂದಿದ್ದು, ನಕಲಿ ಲೋಕಾಯುಕ್ತರ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/9071

Related Articles

Leave a Reply

Your email address will not be published. Required fields are marked *

Back to top button