ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಮತ್ತು ಸಚಿವ ಸಂತೋಷ ಲಾಡ್ ಗೆ ಅಭಿನಂದನೆಗಳು!
ಸುದ್ದಿಲೈವ್/ಶಿವಮೊಗ್ಗ
ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಹೋರಾಟದ ಪರಿಣಾಮ ಚಾಲಕರು ಮತ್ತು ಇತರೆ ಕಾರ್ಮಿಕ ಸಾಮಾಜಿಕ ಭಧ್ರತಾ ಮಂಡಳಿ ರಚಿಸಲು ಸಚಿವ ಸಂಪುಟ ತೀರ್ಮಾನವನ್ನ ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಸ್ವಾಗತಿಸಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು, ಸಂಘಟನೆಯ ರಾಜ್ಯಾಧ್ಯಕ್ಷ ಕುಪೇಂದ್ರ, ಶ್ರಮಿಕ ವರ್ಗವಾಗಿರುವ ಸಾರಿಗೆ ವ್ಯವಸ್ಥೆ ಕಾರ್ಮಿಕರು ಮೂಲಬೂತ ಸೌಕರ್ಯದಿಂದ ವಂಚಿತವಾಗಿತ್ತು. ಹಿಂದಿನ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಗೆ ನ್ಯಾಯ ನೀಡಲು ಮನವಿ ಮಾಡಲಾಗಿತ್ತು.
ಕಟ್ಟಡ ಕಾರ್ಮಿಕರಿಗೆ ಲೇಬರ್ ಸೆಸ್ ಕಟ್ಟಿಸಿಕೊಂಡ ರೀತಿಯಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಕಾರ್ಮಿಕರಿಗೆ ಸೆಸ್ ಕಟ್ಟಿಸಿಕೊಳ್ಳಲು ಸಂಘಟನೆ ಶಿಫಾರಸ್ಸು ಮಾಡಿತ್ತು. ಆಗಿನ ಸರ್ಕಾರ ಒಪ್ಪಿತ್ತು. ಆದರೆ ತಾಂತ್ರಿಕ ತೊಂದರೆಯಿಂದ ಕಳೆದ ಬಿಜೆಪಿ ಆಡಳಿತದಲ್ಲಿ ಜಾರಿಗೊಳಿಸಿರಲಿಲ್ಲ. ಆದರೆ ಕಾನೂನು ತರಲು ಈಗಿನ ಸಚಿವ ಸಂಪುಟ ನಿರ್ಧರಿಸಿದೆ. ಹಾಗಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಮತ್ತು ಕಾರ್ಮಿಕ ಸಚಿವ ಸಂತೋಷ್ ಲಾಡ್ ರನ್ನ ಅಭಿನಂದಿಸಿದರು.
ಚಾಲಕನಿಗೆ ಅಪಘಾತದಲ್ಲಿ ಸಾವಾದರೆ ಪರಿಹಾರ ನೀಡಬೇಕು. ಮೆಕಾನಿಕ್ ಮತ್ತು ಪೆಟ್ರೋಲ್ ಬಂಕ್ ಕಾರ್ಮಿಕರನ್ನೂ ಈ ವಲಯದಲ್ಲಿ ಸೇರಿಸಬೇಕೆಂದು ಸರ್ಕಾರವನ್ನಮನವಿ ಮಾಡಿಕೊಳ್ಳಲಿದ್ದೇವೆ. ಈಗ ಭದ್ರತಾ ಮಂಡಳಿಯಲ್ಲಿ ಚಾಲಕರು ಕ್ಲೀನರ್ ಮತ್ತು ನಿರ್ವಹಕರು ಮಾತ್ರ ಇದ್ದಾರೆ. 30 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಲಾಭಪಡೆದುಕೊಳ್ಳಲಿದೆ ಎಂದರು.
ಹೊಸ ವಾಹನಗಳನ್ನ ನೋಂದಣಿ ಮಾಡಿಕೊಳ್ಳುವಾಗ ಸೆಸ್ ಸಂಗ್ರಹಿಸುವ ಸಲಹೆ ನೀಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ-https://suddilive.in/archives/7253