ಸೂಡಾ ನೂತನ ಅಧ್ಯಕ್ಷ ಸುಂದರೇಶ್ ಜಾತ್ಯಾತೀತ ನಾಯಕರಾ? ಒಂದು ಜಾತಿಗೆ ಸೀಮಿತರಾದವರಾ?
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮೆರವಣಿಗೆ ಹೊರಡುವ ಆರಂಭದಲ್ಲಿ ಅಧ್ಯಕ್ಷರ ಜಾತಿಯನ್ನ ಹೆಸರಿಸಿ ಘೊಷಣೆ ಕೂಗಿದ್ದು ಕೆಲ ಹೊತ್ತು ಗೊಂದಲ ಉಂಟಾಗಿತ್ತು.
ಅಧಿಕಾರ ಪದಗ್ರಹಣ ಕಾರ್ಯಕ್ರಮಕ್ಕಾಗಿ ನೂತನ ಅಧ್ಯಕ್ಷರು ಇಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಆಗಮಿಸಿದ ವೇಳೆ ಅವರನ್ನ ಬರಮಾಡಿಕೊಳ್ಳಲು ಅಭಿಮಾನಿಗಳು ಮುಂದಾಗಿದ್ದಾರೆ.
ಈ ವೇಳೆ ಕೆಲವರು ಗೌಡ್ರಿಗೆ ಜೈ, ಗೌಡ್ರಿಗೆ ಜೈ ಎಂದು ಕೂಗಿದ್ದಾರೆ, ಇದನ್ನ ಕಾಂಗ್ರೆಸ್ ಸಾಮಾಜಿಕ ಜಾತಾಣದ ನಾಯಕಿ ಸೌಗಂಧಿಕರು ಜಾತಿಯ ಹೆಸರು ಹೇಳಿ ಕೂಗದಂತೆ ತಾಕೀತು ಮಾಡಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ ಗೌಡ್ರಿಗೆ ಜೈ ಎಂದಿದ್ದ ಗುಂಪು ವಾದ ಮಾಡಿದೆ. ಸುಂದರೇಶ್ ಅವರು ಜಾತ್ಯಾತೀತ ನಾಯಕರು.ಒಂದು ಜಾತಿಯ ನಾಯಕರಾಗಿ ಗುರುತಿಸಿಕೊಂಡಿಲ್ಲ ಎಂದು ಸೌಗಂಧಿಕರು ಹೇಳಿದ್ದಾರೆ.
ಆ ವೇಳೆ ಎಂಟ್ರಿ ಹೊಡೆದ ನೂತನ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಜಾತಿ ಹೆಸರಿಟ್ಟು ಕೂಗದಂತೆ ತಾಕೀತು ಮಾಡಿದ್ದಾರೆ. ಅಲ್ಲಿಗೆ ಆ ವಿಷಯ ತಣ್ಣಗಾಗಿದೆ.
ಇದನ್ನೂ ಓದಿ-https://suddilive.in/archives/9878