ಸಚಿವರ ಹೆಸರು ಹೇಳದೆ ಹರತಾಳು ಹಾಲಪ್ಪ ವಾಗ್ದಾಳಿ
ಸುದ್ದಿಲೈವ್/ಶಿಕಾರಿಪುರ
ಮಾಜಿ ಸಚಿವ ಹರತಾಳು ಹಾಲಪ್ಪ ಸಚಿವ ಮಧು ಬಂಗಾರಪ್ಪನವರ ಹೆಸರು ತೆಗೆದುಕೊಳ್ಳದೆ ಸವಾಲು ಎಸೆದಿದ್ದಾರೆ. ಸಮಯ ಬಂದಾಗ ಈಡಿಗ ಸಮಯದಾಯಕ್ಕೆ ಏನೇನು ಮಾಡಿದ್ದೇವೆ ಎಂಬುದನ್ನ ವಿವರಿಸಲಿದ್ದೇವೆ ಎಂದರು.
ಅವರು ಶಿಕಾರಿಪುರ ಮಾರಿಕಾಂಬ ಬಯಲು ರಂಗಮಂದಿರದ ಮೈದಾನದಲ್ಲಿ ಬಿಜೆಪಿ ತಾಲೂಕು ಹಿಂದುಳಿದ ವರ್ಗಗಳ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಅವರು ಠೇಂಕಾರದಿಂದ, ಅಹಂಕಾರದಿಂದ ಮಾತುಗಳನ್ನ ಆಡುತ್ತಾರೆ. ಅವರು ಸಮುದಾಯಕ್ಕೆ ಸಹಾಯ ಮಾಡಲಿ ನಮಗೆ ಅಭ್ಯಂತರವಿಲ್ಲ. ಆದರೆ ಅಹಂಕಾರದ ಮಾತನ್ನ ಸಹಿಸಲಾಗದು ಎಂದು ವೇದಿಕೆಯಲ್ಲಿ ಗುಟರ್ ಹಾಕಿದ್ದಾರೆ.
ಈಡಿಗರಿಗೆ ಮಠ ಇರಲಿಲ್ಲ. ಸೋಲೂರಿನಲ್ಲಿ ಮಠಕ್ಕೆ 3 ಕೋಟಿ ನೀಡಿ ಮಠ ನಿರ್ಮಿಸಲಾಯಿತು. ಈಡಿಗರ ಜಿಲ್ಲಾ ಸಮುದಾಯ ಭವನದ ನಿರ್ಮಾಣವೂ ಸಹ ಬಿಎಸ್ ವೈ ಅವರ ಕಾಣಿಕೆ ಇದೆ. ಬಿಎಸ್ ವೈ ಸಿಎಂ ಆಗಿದ್ದಾಗ ನಿಟ್ಟೂರಿನಲ್ಲಿ ಮಠಕ್ಕೆ ಜಾಗಕೊಡಿಸಿದ್ದಾರೆ. ಮಠ ನಿರ್ಮಾಣಕ್ಕೆ 5 ಕೋಟಿ ರೂ ಅನುದಾನ ನೀಡಲಾಗಿದೆ. ಮಠ ನಿರ್ಮಾಣದ ಹಂತದಲ್ಲಿದೆ ಎಂದರು.
ಇಷ್ಟುದಿನ ಸಂಸದ ರಾಘವೇಂದ್ರ ಅವರನ್ನ ರಾಘಣ್ಣ ಎಂದಿದ್ದು ಸಾಕು ಸಾಹೇಬ್ರು ಎಂದು ಹೇಳುವಂತಾಗಬೇಕು. ಅವರಿಗೆ ಮೋದಿ ಕ್ಯಾಬಿನೇಟ್ ನಲ್ಲಿ ಸಚಿವ ಸ್ಥಾನ ಪಡೆಯುವಂತಾಗ ಬೇಕು. ಸಚಿವ ಸ್ಥಾನ ಪಡೆಯುವ ಮೂಲಕ ಅವರು ರಾಘಣ್ಣನಿಂದ ಸಾಹೇಬ ಸ್ಥಾನಕ್ಕೇರಬೇಕೆಂದರು.
ಇದನ್ಬೂ ಓದಿ-https://suddilive.in/archives/9803