ರಾಜ್ಯ ಸುದ್ದಿಗಳು

ಜಿಲ್ಲೆಯ ಮೂವರು ನಿಗಮ‌ಮಂಡಳಿಗೆ ಆಯ್ಕೆ-ಕುತೂಹಲ ಮೂಡಿಸಿದ ಅಲ್ಪಸಂಖ್ಯಾತ ವಿಭಾಗದ ನಾಯಕರ ನಡೆ?

ಸುದ್ದಿಲೈವ್/ಶಿವಮೊಗ್ಗ

ಚುನಾವಣೆಯ ಹೊಸ್ತಿಲಿನಲ್ಲಿರುವ ವೇಳೆ ರಾಜ್ಯ ಸರ್ಕಾರ 44 ಜನರನ್ನ ನಿಗಮ ಮಂಡಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನ‌ ನೇಮಿಸಿ ಆದೇಶಿಸಿದೆ.

ಈ ಹಿಂದ 32 ನಿಗಮ ಮಂಡಳಿಗೆ ಶಾಸಕರನ್ನ ನೇಮಿಸಲಾಗಿತ್ತು.ಈಗ 44 ಸದಸ್ಯರನ್ನ ನೇಮಿಸಲಾಗಿದೆ. 44 ಸದಸ್ಯರಲ್ಲಿ ಶಿವಮೊಗ್ಗದ ಮೂವರು ವಿವಿಧ ನಿಗಮ ಮಂಡಳಿಗೆ ಆಯ್ಕೆಯಾಗಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಅವರನ್ನ ಸೂಡಾ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಈ ಹಿಂದೆ ಶಿವಮೊಗ್ಗ ಗ್ರಾಮಾಂತರ ವಿಧಾನ ಸಭೆಗೆ ಆಕಾಂಕ್ಷಿಯಾಗಿದ್ದ ಜಿ.ಪಲ್ಲವಿಯನ್ನ ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಗೆ ಆಯ್ಕೆ ಮಾಡಲಾಗಿದೆ.

ಶಿವಮೊಗ್ಗದಲ್ಲಿರುವ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್ ಅವರನ್ನ ಆಯ್ಕೆ ಮಾಡಲಾಗಿದೆ. ಭದ್ರ ಕಾಡಾಗೆ ಚಿಕ್ಕಮಗಳೂರಿನ ಡಾ.ಅಂಶುಮಂತ್ ರನ್ನ ನೇಮಿಸಲಾಗಿದೆ.

ಕುತೂಹಲ ಮೂಡಿಸಿದ ಪಕ್ಷದ ಅಲ್ಪ ಸಂಖ್ಯಾತ ವಿಭಾಗದ ನಡೆ?

ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿರಯವ ಅಲ್ಪಸಂಖ್ಯಾತ ವಿಭಾಗದ ನಾಯಕರನ್ನ ಯಾವುದಾದರೂ ನಿಗಮ ಮಂಡಳಿಗೆ ನೇಮಿಸಬೇಕೆಂದು ಆಗ್ರಹಿಸಿದ್ದರು.‌ ಆದರೆ ಒಬ್ಬ ಅಲ್ಪಸಂಖ್ಯಾತರ ಹೆಸರನ್ನೂ ಈ 44 ಸ್ಥಾನಗಳಲ್ಲಿ ಶಿವಮೊಗ್ಗದವರನ್ನ ಪ್ರಕಟಿಸಿಲ್ಲ. ಈಗ ಅವರ ನಡೆ ಏನಾಗಲಿದೆ ಕುತೂಹಲ ಮೂಡಿಸಿದೆ.

Related Articles

Leave a Reply

Your email address will not be published. Required fields are marked *

Back to top button