ಕ್ರೈಂ ನ್ಯೂಸ್
ಮಹಿಳೆಗೆ ವಿಷ ಉಣಿಸಿದ ಪ್ರಕರಣ-ಗ್ರಾಮ ಪಂಚಾಯಿತಿ ಚಂದ್ರನಾಯ್ಕ್ ಸ್ಪಷ್ಟನೆ
ಸುದ್ದಿಲೈವ್/ಶಿವಮೊಗ್ಗ
ತಾಲೂಕಿನ ಸಿದ್ಲೀಪುರ ಗ್ರಾಮದಲ್ಲಿ ಪತಿಯಿಂದಲೇ ಪತ್ನಿ ಮತ್ತು ಮಗುವಿಗೆ ವಿಷ ಉಣಿಸಿರುವ ಘಟನೆ ಮತ್ತು ಈ ಘಟನೆಯಲ್ಲಿ ಪತ್ನಿ ಸಾವನ್ನಪ್ಪಿದ್ದು,, ಮೃತರ ಕುಟುಂಬ ಚಂದ್ರನಾಯ್ಕ್ ಅವರಿಂದಲೇ ಮಗಳಿಗೆ ಪತಿ ಮಂಜುನಾಥ್ ವಿಷ ಉಣಿಸಿ ಹತ್ಯೆ ಮಾಡಿರುವ ಕುರಿತು ಆರೋಪ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಚಂದ್ರನಾಯ್ಕ್ ಸುದ್ದಿಲೈವ್ ಗೆ ಸ್ಪಷ್ಟನೆ ನೀಡಿದ್ದಾರೆ.
ಮುದ್ದಿನಕೊಪ್ಪದ ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ಚಂದ್ರನಾಯ್ಕ್ ನಾವು ಗಂಡ ಹೆಂಡತಿಯರ ವಿಷಯಕ್ಕೆ ಹೋಗಿಲ್ಲ. ನಾಲ್ಕುವರ್ಷದಿಂದ ಅವರ ತಂಟೆಗೆ ಹೋಗಿಲ್ಲ. ಆದರೆ ನನ್ನ ಹೆಸರು ತೆಗೆದುಕೊಂಡಿದ್ದಾರೆ. ನನ್ನ ವಿರುದ್ಧ ಅನೈತಿಕ ಸಂಬಂಧದ ಆರೋಪ ಮಾಡಲಾಗಿದೆ ಆದರೆ ಇವೆಲ್ಲವೂ ಸತ್ಯಕ್ಕೆ ದೂರವಾದುದು ಎಂದು ಚಂದ್ರನಾಯ್ಕ್ ಸ್ಪಷ್ಠನೆ ನೀಡಿದ್ದಾರೆ.
ಮೊದಲಿನ ಮಗುವಿಗೆ ಸೀಳು ತುಟಿಯಾದಾಗ ನಾವು ಆರ್ಥಿಕವಾಗಿ ಸಹಾಯ ಮಾಡಿರುವುದಾಗಿ ಚಂದ್ರನಾಯ್ಕ್ ಹೇಳಿದ್ದಾರೆ.
ಇದನ್ನೂ ಓದಿ-https://suddilive.in/archives/9514