ರಾಜಕೀಯ ಸುದ್ದಿಗಳು

ನಾಡಗೀತೆ ಕುರಿತು ಚರ್ಚಿಸಿ ಹೇಳುವೆ-ಮಧು ಬಂಗಾರಪ್ಪ

ಸುದ್ದಿಲೈವ್/ಶಿವಮೊಗ್ಗ

ನಾಡ ಗೀತೆ ವಿಚಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಡ್ಡಾಯವಲ್ಲ ಎಂಬ ವಿಷಯದಲ್ಲಿ ಸಚಿವ ಮಧು ಬಂಗಾರಪ್ಪ  ಪ್ರತಿಕ್ರಿಯಿಸಿದ್ದು, ಈ ಬಗ್ಗೆ ವಿಷಯ ತಿಳಿದುಕೊಂಡು ಮಾತನಾಡುವುದಾಗಿ ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾಕೆ ಹೀಗೆ ಆದೇಶಿಸಿದೆ ಎಂಬುದನ್ನ ತಿಳಿದುಕೊಂಡು ಮಾತನಾಡುತ್ತೇನೆ. ನಾಡಗೀತೆ ಕಡ್ಡಾಯ ಆದರೆ ರೈತಗೀತೆ ಕಡ್ಡಾಯವಿಲ್ಲ. ಈ ಹೇಳಿಕೆ ಬದಲು ಯಾಕೆ ಗೊಂದಲವಾಗಿದೆ ತಿಳಿದು ಮಾಡನಾಡುವೆ. ನನ್ನ ಇಲಾಖೆ ಯಾವುದೇ ಆ ರೀತಿ ಆದೇಶವಿಲ್ಲ.

ಸಂವಿಧಾನ‌ಪೀಠಿಕೆಯಲ್ಲಿದ್ದಂತೆ ಕನ್ನಡ ಭಾಷೆಯಲ್ಲಿದ್ದರೆ ಕನ್ನಡ, ಉರ್ದುವಿನಲ್ಲಿದ್ದರೆ ಉರ್ದು ಭಾಷೆಯಲ್ಲಿ ಹೇಳಬಹಿದಾಗಿದೆ. ಎಲ್ಲಡೆ ಕನ್ನಡ‌ಭಾಷೆಯಲ್ಲಿಯೇ ಹಾಡಲಾಗುತ್ತದೆ. 1.20 ಕೋಟಿ ಮಕ್ಕಳಿಗೆ ರಾಷ್ಟ್ರಗೀತೆ ಕಡ್ಡಾಯವಾಗಿದೆ ಎಂದರು.

ಶಾಲೆ ಎಂದರೆ ಶಿಸ್ತು, ಯೂನಿಫಾರಂ ರೀತಿ ಇರಬೇಕು. ನಾನು ಶಾಲೆಯಲ್ಲಿ ಮಕ್ಕಳು ಪುಸ್ತಕಗಳಿಲ್ಲದೆ ಹಾಡುತ್ತಾರೆ. ಕುವಪು ಅವರು ಬರೆದ ರಾಷ್ಟ್ರಗೀತೆಯಲ್ಲಿ ಜಾತ್ಯಾತೀತವಾಗಿ ಪಕ್ಷಾತೀತವಾಗಿ, ಪ್ರಕೃತಿಯ ಸಂಪರ್ಕವಿರುವ ಗೀತೆಯಾಗಿದೆ. ಚರ್ಚೆ ಮಾಡಿ ಮಾತನಾಡುವೆ. ನನ್ನ ಇಲಾಖೆಯಲ್ಲಿ ಖಾಸಗಿ ಅನುದಾನ ಅನುದಾನ ರಹಿತ‌ ಶಾಲೆ‌ ಎಂಬುದಿಲ್ಲವೆಂದರು.‌

Related Articles

Leave a Reply

Your email address will not be published. Required fields are marked *

Back to top button