ಮೈಲಾರೇಶ್ವರ ಜಾತ್ರೆಗೆ ಹೆಚ್ಚಿನ ನೀರು ಹರಿಸಲು ಸೂಚನೆ
ಸುದ್ದಿಲೈವ್/ಶಿವಮೊಗ್ಗ
ತುಂಗ-ಭದ್ರಾ ನದಿ ಆಶ್ರಿತ ಕುಡಿಯುವ ನೀರಿನ ಯೋಜನೆಗಳಿಗೆ ಕುಡಿಯುವ ನೀರನ್ನು ಪೂರೈಸಲು ಹಾಗೂ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಕಾರ್ಣಿಕೋತ್ಸವ ಪ್ರಯುಕ್ತ ಭದ್ರಾ ಜಲಾಶಯದಿಂದ ನದಿ ಮೂಲಕ ನೀರು ಹರಿಸಲು ತೀರ್ಮಾನಿಸಿದೆ.
2023-24ನೇ ಸಾಲಿನಲ್ಲಿ ಭದ್ರಾ ಜಲಾಶಯದಿಂದ ನದಿಯ ಮೂಲಕ ಹಾವೇರಿ. ಗದಗ ಮತ್ತು ವಿಜಯನಗರ ಜಿಲ್ಲೆಯ ವ್ಯಾಪ್ತಿಗೆ ಬರುವ ಗದಗ, ಬೆಟಗೇರಿ, ಹಾವೇರಿ, ರಾಣೀಬೆನ್ನೂರ, ಬ್ಯಾಡಗಿ, ಕೂಡ್ಲಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ಮತ್ತು ಹಿರೇಕೆರೂರು ಪಟ್ಟಣಗಳಿಗೆ ಅಲ್ಲದೇ ನದಿಯ ಪಕ್ಕದಲ್ಲಿ ಬರುವ ಗ್ರಾಮಗಳಿಗೆ ಬಹುಗ್ರಾಮ ನದಿ ನೀರು ಯೋಜನೆಯಡಿ ಕುಡಿಯುವ ನೀರು ಒದಗಿಸಲು ದಿ:05.02.2024ರ ರಾತ್ರಿ 10.00 ಗಂಟೆಯಿಂದ ದಿ:10.02.2024ರ ರಾತ್ರಿ 10.00 ಗಂಟೆವರೆಗೆ ಪ್ರತಿದಿನ 2000 ಕ್ಯೂಸೆಕ್ಸ್ನಂತೆ ಒಟ್ಟು 12000 ಕ್ಯೂಸೆಕ್ಸ್ ನೀರು (1.036 ಟಿ.ಎಂ.ಸಿ) ಹರಿಸಲು ನಿರ್ಧರಿಸಲಾಗಿತ್ತು.
ಮತ್ತು ವಿಜಯನಗರ ಜಿಲ್ಲೆ, ಹೂವಿನಹಡಗಲಿ ತಾಲ್ಲೂಕು, ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕೋತ್ಸವ ಪ್ರಯುಕ್ತ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ದಿ:18.02.2024ರಿಂದ ದಿ:23.02.2024ರವರೆಗೆ ಪ್ರತಿದಿನ 500 ಕ್ಯೂಸೆಕ್ಸ್ನಂತೆ (0.26 ಟಿ.ಎಂ.ಸಿ) ನೀರನ್ನು ಹರಿಸಲು ಪ್ರಕಟಿಸಲಾಗಿತ್ತು. ಅದರಂತೆ ನೀರು ಹರಿಸಲಾಗುತ್ತಿದೆ.
ಎರಡೂ ಯೋಜನೆಗಳಿಗೆ ಮೈಸೂರು ಆಯುಕ್ತರ ಕಚೇರಿ ಮಾರ್ಪಡಿಸಿ ಈ ಕೆಳಗಿನಂತೆ ನೀರು ಹರಿಸಲು ಸೂಚಿಸಿದ್ದಾರೆ. ಅದರನ್ವಯ 12000_ ಕ್ಯೂಸೆಕ್ಸ್ ನೀರಿನಿಂದ 13,500 ಕ್ಯೂಸೆಕ್ಸ್ ನೀರು ಹರಿಸಲು ಸೂಚಿಸಲಾಗಿದೆ. 1.036 ಟಿಎಂಸಿ ನೀರಿನಿಂದ 1.16 ಟಿಎಂಸಿ ನೀರು ಹರಿಸಲು ಸೂಚಿಸಲಾಗಿದೆ.
ಇದನ್ನೂ ಓದಿ-https://suddilive.in/archives/9209