ಕಣ್ಣೀರು ಹಾಕಿದ ಸುಶೀಲ್ ತಂದೆ
ಸುದ್ದಿಲೈವ್/ಶಿವಮೊಗ್ಗ
ಮಗ ಸುಶೀಲ್ ಮೇಲೆ ಚಾಕು ಇರಿದಿರುವ ಘಟನೆ ಕುರಿತು ತಂದೆ ಚನ್ನಬಸಪ್ಪ ಮಳಗಿಯವರು ಕಣ್ಣೀರು ಹಾಕಿದ್ದಾರೆ. ಮನೆ ಮುಂದೆ ನಡೆದುಕೊಂಡು ಹೋಗುತ್ತಿದ್ದ ವೇಳೆ ನಾಲ್ವರು ಬಂದು ಚಾಕು ಇರಿದಿರುವ ಬಗ್ಗೆ ಭಾವುಕರಾಗಿದ್ದಾರೆ.
ನಿನ್ನೆ ಸುಶೀಲ್ ದೊಡ್ಡಪೇಟೆಯಲ್ಲಿ ಅಪ್ರಾಪ್ತ ಬಾಲಕನಿಗೆ ಸೈಕಲ್ ವೀಲಿಂಗ್ ಮಾಡಬೇಡಿ ಎಂದು ಬುದ್ದಿವಾದ ಹೇಳಿದ್ದಕ್ಕೆ ನಂತರ ಬೈಕ್ ನಲ್ಲಿ ಬಂದ ನಾಲ್ವರು ಯುವಕರು ಚಾಕು ಇರಿದು ಪರಾರಿಯಾಗಿದ್ದರು.
ಇಂದು ಸಂಸದ ರಾಘವೇಂದ್ರ ಟೌನ್ ಪೊಲೀಸ್ ಠಾಣೆಯ ಮುಂದೆ ಪ್ರತಿಭಟಿಸಿದ ಮೇಲೆ ಚನ್ನವೀರಪ್ಪ ಮಳಗಿ ಭಾಗಿಯಾಗಿದ್ದರು. ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ತಂದೆ ಮಗ ಒಳ್ಳೆಯ ಗುಣವುಳ್ಳವನು. ಯಾರ ತಂಟೆಗೂ ಹೋಗದ ಯುವಕನವನು. ಅವನ ಮೇಲೆ ಚಾಕು ಇರಿಯಲಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.
ಆರೋಪಿಳಿಗೆ ಗಲ್ಲು ಶಿಕ್ಷೆ ವಿಧಿಸಿ
ಶಿಕಾರಿಪುರದ ದೊಡ್ಡಪೇಟೆ ಬೀದಿಯಲ್ಲಿ ಚಾಕು ಇರಿಯಲಾಗಿದೆ. ಯಾವುದೇ ಅಹಿತಕರ ಘಟನೆಗಳು ಈ ದೊಡ್ಡಪೇಟೆ ಬೀದಿಯಲ್ಲಿ ನಡೆದಿರಲಿಲ್ಲ. ಈ ಘಟನೆಗಳು ಮರುಕಳಿಸಬಾರದು ಎಂದರೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಅವಶ್ಯಕತೆ ಇದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ-https://suddilive.in/archives/8593