KSRTC ಬಸ್ ನಿಲ್ದಾಣದಲ್ಲಿ ಕಳುವು ಪ್ರಕರಣ 19 ಕ್ಕೆ ಏರಿಕೆ-ಕರವೇ ಯುವಸೇನೆಯ ಮನವಿಯೇನು ಗೊತ್ತ?
ಸುದ್ದಿಲೈವ್/ಶಿವಮೊಗ್ಗ
ನಿದ್ರೆಗೆ ಜಾರಿದ ಅಧಿಕಾರಿಗಳಿಗೆ ಕೊನೆಗೂ ಸಂಘಟನೆಯೊಂದು ಮನವಿ ಸಲ್ಲಿಸಿ ಎಚ್ಚರಿಸುವ ಪ್ರಯತ್ನ ಮಾಡಿದೆ. ಆದರೂ ಮನವಿ ಕೊಡುವ ಮುಂಚೆ ಮತ್ತೊಂದು ಕಳ್ಳತನ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಧೂರು ದಾಖಲಾಗಿದೆ.
ಕರ್ನಾಟಕ ರಕ್ಷಣ ವೇದಿಕೆ ಯುವಸೇನೆ ಕಿರಣ್ ಕುಮಾರ್ ಅವರ ನೇತೃತ್ವದಲ್ಲಿ ಇಂದು KSRTC ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಹಿತರಕ್ಷಣೆ ಕಾಪಾಡುವಂತೆ ಮನವಿಯಲ್ಲಿ ಉಲ್ಲೇಖಿಸಿದೆ.
ಬಸ್ ನಿಲ್ದಾಣದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ ಸಾರ್ವಜನಿಕರ ರಕ್ಷಣೆ ಕಾಪಾಡಬೇಕು. 11 ತಿಂಗಳಲ್ಲಿ 19 ಕಳ್ಳತನವಾಗಿದೆ. ಸಿಸಿ ಟಿವಿ ಅಳವಡಿಸಿ ಸಾರ್ವಜನಿಕರಿಗೆ ಆಗುವ ಅನಾನುಕೂಲವನ್ನ ಸರಿಪಡಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ.
ಮನವಿ ನೀಡುವ ಎರಡು ದಿನ ಮೊದಲು ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಭದ್ರಾವತಿಗೆ ಕಾರ್ಯಕ್ರಮಕ್ಕೆ ಹೊರಟಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್ ನಿಂದ 1.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳೆದುಕೊಂಡಿದ್ದಾರೆ. ಇದರಿಂದ 11 ತಿಂಗಳಲ್ಲಿ 19 ಕಳುವು ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾತಿ ಮುಂದುವರೆದಿದೆ ವಿನಃ ಯಾವ ಕ್ರಮ ಜರುಗಿಲ್ಲ.
15 ದಿನಗಳಲ್ಲಿ ಸಿಸಿ ಟಿವಿ ಅಳವಡಿಸದಿದ್ದರೆ. ಕರವೇ ಯುವ ಸೇನೆ ರಸ್ತೆಗಿಳಿದು ಪ್ರತಿಭಟಿಸುವುದಾಗಿ ಎಚ್ಚರಿಸಿದೆ.
ಇದನ್ನೂ ಓದಿ-https://suddilive.in/archives/3807