ಠಾಣೆಯ ಮುಂದೆಯೇ ಸಂಸದರ ಗುಡುಗು
ಸುದ್ದಿಲೈವ್/ಶಿಕಾರಿಪುರ
ಶಿಕಾರಿಪುರದಲ್ಲಿ ನಿನ್ನೆ ಸಂಜೆ ಪೇಟೆ ಬೀದಿಯಲ್ಲಿ ಸುಶೀಲ್ ಮೇಲೆ ಚಾಕು ಇರಿದಿದ್ದನ್ನ ಖಂಡಿಸಿ ಹಾಗೂ ಆರೋಪಿಗಳನ್ನ ಶೀಘ್ರದಲ್ಲಿ ಬಂಧಿಸುವಂತೆ ಆಗ್ರಹಿಸಿ ಇಂದು ಸಂಸದ ರಾಘವೇಂದ್ರ ಅವರ ನೇತೃತ್ವದಲ್ಲಿ ಟೌನ್ ಠಾಣೆಯಲ್ಲಿ ಪ್ರತಿಭಟನೆ ನಡೆಸಲಾಗಿದೆ.
ವೀಲಿಂಗ್ ಮಾಡಿದ್ದಕ್ಕೆ ವೀಲಿಂಗ್ ಮಾಡಬೇಡ ಎಂದು ವಿನಂತಿಸಿದ್ದಕ್ಕೆ ವಾಪಾಸ್ ಹೋದ ಯುವಕರು ರಾತ್ರಿ ಯುವಕನನ್ನ ಚಾಕುವಿನಿಂದ ಇರಿದಿದ್ದಾರೆ. ಬಿಲಾಲ್ ನ ಸಾಮಿಲ್ ನಲ್ಲಿ ಒಂಟೆ, ಜಿಂಕೆ ಸಾಕಿದ್ದು ಆತನ ವಿರುದ್ಧ ಪ್ರಕರಣ ದಾಖಲಾಗುತ್ತದೆ. ಆದರೆ ಯಾವುದೇ ಕ್ರಮ ಜರುಗಿಸೊಲ್ಲ.
ಶಿಕಾರಿಪುರದ ಹೊಸದಾಗಿ ಬಂದ ಪಿಎಸ್ ಐ ನಮ್ಮ ಹಿಂದೂ ಕಾರ್ಯನಿಗೆ ರೌಡಿಶೀಟರ್ ಪಟ್ಟಿಗೆ ಸೇರಿಸಲಾಗುತ್ತದೆ. ನೀವು ಹಿಂದೂ ಅಲ್ವಾ ಹಿಂದೂ ಯುವಕರ ಮುಂದೆ ಗದರಿಸಿದ್ದೀರಾ? ಹಗಲುಮೂರು ಹೊತ್ತು ಯೂನಿಫಾರಂನಲ್ಲೇ ಇರ್ತೀಯಾ ಎಂದು ಸಂಸದರು ಗದರಿದ್ದಾರೆ.
ಶಿಕಾರಿಪುರದಲ್ಲಿ ಹಲ್ಕಟ್ ಗಿರಿ ಮಾಡಿದಾಗ ಓಡಿಸೋದು ಗೊತ್ತು. ಪ್ರೀತಿಯಿಂದ ನೋಡೋದು ಗೊತ್ತು. ಎರಡು ಮೂರು ದಿನಗಳಲ್ಲಿ ಮಾರಿಹಬ್ಬ ನಡೆಸಲು ಸಿದ್ದಗೊಳ್ಳುತ್ತಿದೆ. ನಿನ್ನೆ ಘಟನೆ ನಡೆದಾಗ ಹಿಂದೂ ಯುವಕರು ಮತ್ತು ಪೋಷಕರು ಮನೆ ಬಿಡುವಂತೆ ಗಾಬರಿ ಹುಟ್ಟಿಸಿದೆ. ಒಂದು ಗಂಟೆಯಲ್ಲಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಆದರೆ ಸಣ್ಣಪುಟ್ಟ ವಿಷಯಕ್ಕೆ ಚಾಕು ಇರಿದಿದ್ದಾರೆ ಎಂದರೆ ಯಾರೂ ಕ್ಷಮಿಸೊಲ್ಲ ಎಂದು ಗುಡುಗಿದರು.
ಮಡಿಕೇರಿಯ ಕುಟ್ಟಪ್ಪ ಬೆಂಗಳೂರು ರುದ್ರೇಶ್, ಶಿವಮೊಗ್ಗದ ಹರ್ಷನನ್ನ ಕೊಲೆ ಮಾಡಲಾಯಿತು. ಸಣ್ಣಪುಟ್ಟ ವಿಷಯಕ್ಕೆ ಚಾಕು ಇರಿದಿದ್ದಾರೆ. ಸರ್ಕಾರ ಸರಿಯಾದ ರೀತಿಯಲ್ಲಿ ತಿಳಿ ಹೇಳಬೇಕು. ಒಲ್ಲವಾದಲ್ಲಿ ಮುಂದಿನ ದಿನಗಳಲ್ಲಿಯೇ ಹಿಂದೂಗಳೇ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಆರೋಪಿಗಳ ವಿರುದ್ಧ ಸರಿಯಾದ ಕಾನೂನು ಜಾರಿಯಾಗಬೇಕು. ಬಾಲಾಪರಾಧಿ ಎಂದು ಕಾನೂನು ಸಡಿಲಗೊಳಿಸಬೇಡಿ. ಜಾಮೀನು ಸಿಗದಂತೆ ಪೊಲೀಸ್ ಅಧಿಕಾರಿಗಳು ಕ್ರಮಜರುಗಿಸಬೇಕು. ರಾತ್ರೋರಾತ್ರಿಯೇ ಯುವಕರ ಗುಂಪಿನಿಂದ ಪ್ರತಿಭಟಿಸಬಹುದಿತ್ತು. ಆದರೆ ನಮಗೆ ಹಬ್ಬ ಶಾಂತಿಯುತವಾಗಿ ನಡೆಯಬೇಕಿದೆ. ಹಾಗಾಗಿ ಬೆಳಿಗ್ಗೆ ಪ್ರತಿಭಟಿಸಲಾಗಿದೆ ಎಂದು ಆಗ್ರಹಿಸಿದರು.
ಇದನ್ನೂ ಓದಿ-https://suddilive.in/archives/8583