ಕ್ರೈಂ ನ್ಯೂಸ್
ಸಚಿವರ ಮತ್ತು ನಿಗಮಮಂಡಳಿಯ ಅಧ್ಯಕ್ಷ ಸ್ವಾಗತ ಕಾರ್ಯಕ್ರಮದಲ್ಲಿ ಕಳ್ಳರ ಹಾವಳಿ
ಸುದ್ದಿಲೈವ್/ಶಿವಮೊಗ್ಗ
ಸಚಿವರ ಮತ್ತು ನಿಗಮಮಂಡಳಿಗೆ ನೂತನ ಅಧ್ಯಕ್ಷರ ಸ್ವಾಗತ ಕಾರ್ಯಕ್ರಮದಲ್ಲಿ ದೃಶ್ಯ ಮಾಧ್ಯಮದ ಕ್ಯಾಮೆರಾ ಮನ್ ಅವರ ಹಣ ಕಳುವಾಗಿದೆ. ಇದರಿಂದ ಖದೀಮರ ಹಾವಳಿ ಮುಂದು ವರೆದಿದೆ.
ಇಂಧನ ಸಚಿವ ಕೆ.ಜೆ.ಜಾರ್ಜ್ ಮತ್ತು ರಾಜ್ಯ ಅರಣ್ಯ ಕೈಗಾರಿಜಾ ನಿಗಮಮಂಡಳಿ ಅಧ್ಯಕ್ಷರಾಗಿ ನೇಮಕ ಗೊಂಡಿರುವ ಗೋಪಾಲ ಕೃಷ್ಣ ಬೇಳೂರು ಅವರ ಸ್ವಾಗತಕ್ಕೆ ಬೆಕ್ಕಿನ ಕಲ್ಮಠದ ಬಳಿ ಕಾಂಗ್ರೆಸ್ ಪಕ್ಷ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ದೃಶ್ಯ ಮಾಧ್ಯಮದ ಕ್ಯಾಮೆರಾ ಮನ್ ಅವರ ಪ್ಯಾಂಟ್ ಜೇಬಿನಲ್ಲಿದ್ದ 8 ಸಾವಿರ ರೂ. ಹಣ ಕಳೆದಿದೆ. ಇದರಿಂದ ಖದೀಮರ ಕೈಚಳಕ ಸ್ವಾಗತ ಕಾರ್ಯಕ್ರಮದಲ್ಲೂ ಮುಂದು ವರೆದಿದೆ.
ಇದನ್ನೂ ಓದಿ-https://suddilive.in/archives/8319