ಖಾಸಗಿ ಬಸ್ ನಿಲ್ದಾಣದಲ್ಲಿ ಅವ್ಯಸ್ಥೆಯ ಬಗ್ಗೆ ಮಾಲೀಕರ ಮತ್ತು ಏಜೆಂಟರ ಆಕ್ಷೇಪ
ಸುದ್ದಿಲೈವ್/ಶಿವಮೊಗ್ಗ
ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ ಗಳು ನಿಗದಿತ ಸಮಯಕ್ಕಿಂತ ಮೊದಲೇ ನಿಲ್ದಾಣಕ್ಕೆ ಬರುವುದರಿಂದ ಪ್ರಯಾಣಿಕರು ಬರುತ್ತಿಲ್ಲ. ಇದಕ್ಕೆ ಸೂಕ್ತ ಕ್ರಮ ಜರುಗಿಸುವಂತೆ ಬಸ್ ಮಾಲೀಕರು ಮತ್ತು ಏಜೆಂಟರು ಆಗ್ರಹಿಸಿದ್ದಾರೆ.
ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ ಮಾಲೀಕರು ಮತ್ತು ಏಜೆಂಟರ ನಡುವೆ ವಾಗ್ಯುದ್ಧವಾಗಿದೆ. ಸ್ಥಳಕ್ಕೆ ಪಶ್ಚಿಮ ಸಂಚಾರಿ ಪೊಲೀಸ್ ಪಿಎಸ್ ಐ ತಿರುಮಲೇಶ್ ಭೇಟಿ ನೀಡಿದ್ದಾರೆ. ಸಮಸ್ಯೆಯ ಬಗ್ಗೆ ಠಾಣೆಗೆ ದೂರು ನೀಡುವಂತೆ ಸೂಚಿಸಿದ್ದಾರೆ.
ಖಾಸಗಿ ಬಸ್ ನಿಲ್ದಾಣದಲ್ಲಿ 525 ಕ್ಕೂ ಹೆಚ್ಚು ಬಸ್ ಗಳು ಸಂಚರಿಸಲಿದೆ. ಕೊರೋನದಿಂದ ಇದರ ಸಂಖ್ಯೆ ಕಡಿಮೆಯಾಗಿದೆ. ಬಸ್ ನಿಲ್ದಾಣಕ್ಕೆ ಬರುವುದಕ್ಕೂ ಮತ್ತು ನಿಲ್ದಾಣ ಬಿಡುವುದಕ್ಕೂ ಸಮಯ ನಿಗದಿಯಾಗಿರುತ್ತದೆ. ಆದರೆ ಬಸ್ ನಿಲ್ದಾಣಕ್ಕೂ ಮೊದಲೆ ಬಸ್ ಗಳನ್ನ ಸೈಡ್ ಹಚ್ಚಲಾಗುತ್ತದೆ.
ಇದರಿಂದ ನಿಗದಿತ ಸಮಯಕ್ಕೆ ಬಂದು ಹೋಗುವ ಬಸ್ ಗಳಿಗೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಜೊತೆಗೆ ಬಸ್ ಸಂಚಾರಕ್ಕೂ ಅಡ್ಡಿಯಾಗುತ್ತಿದೆ ಎಂದು ದೂರಲಾಗಿದೆ. ಪಾಲಿಕೆಗೆ ಬಸ್ ಮಾಲೀಕರ ಸಂಘದಿಂದ ವರ್ಷಕ್ಕೆ 12 ಲಕ್ಷ ರೂ. ಹಣ ನೀಡಲಾಗುತ್ತದೆ. ದಿನಕ್ಕೆ ಒಂದು ಬಸ್ ಗೆ 15 ರೂ ನಿಗದಿಪಡಿಸಲಾಗಿದೆ. ಆದರೆ ಈ ಬಸ್ ನಿಲ್ದಾಣದಲ್ಲಿ ಸಮರ್ಪಕ ಸೆಕ್ಯೂರಿಟಿ ಇಲ್ಲ. ಸೆಕ್ಯೂರಿಟಿ ಇಬ್ಬರು ಇದ್ದರೂ ಅವರ ಮಾತು ಯಾರೂ ಕೇಳಲ್ಲ. ಇದರಿಂದ ಬಸ್ ಗಳ ಓಡಾಟಕ್ಕೂ ತೊಂದರೆಯಾಗುತ್ತಿದೆ ಎಂದು ದೂರಿದರು.
ಇದನ್ನೂ ಓದಿ-https://suddilive.in/archives/8243